ಬಸ್ ಚಕ್ರದಡಿಗೆ ಸಿಲುಕಿ ಬಾಲಕಿ ಮೃತ್ಯು
Update: 2017-12-09 15:09 GMT
ಕೊಳ್ಳೇಗಾಲ,ಡಿ.9: ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಬಾಲಕಿಯೊಬ್ಬಳ ಮೇಲೆ ಹರಿದು ಬಾಲಕಿ ಸ್ಧಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಟಗರಪುರ ಬಳಿ ಮೋಳೆ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಟಗರಪುರ ಮೋಳೆ ಗ್ರಾಮದ ರಾಜಶೆಟ್ಟಿ ಎಂಬುವವರ ಪುತ್ರಿ ಆಶಾ(16) ವರ್ಷ ಮೃತಪಟ್ಟಿರುವ ಬಾಲಕಿ. ಮೈಸೂರಿನಿಂದ ಕೊಳ್ಳೇಗಾಲಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಚಕ್ರಕ್ಕೆ ಸಿಲುಕಿದ ಬಾಲಕಿ ಸ್ಧಳದಲ್ಲೇ ಮೃತಪಟ್ಟಿದ್ದಾಳೆ.
ಆಕ್ರೋಶಗೊಂಡ ಗ್ರಾಮಸ್ಧರು ರಸ್ತೆ ತಡೆದು ಪ್ರತಿಭಟಿಸಿದರು. ರಸ್ತೆಗೆ ಸೂಕ್ತ ಬ್ಯಾರಿಕೇಡ್ಗಳು ಹಾಗೂ ರಸ್ತೆ ಡುಬ್ಬಗಳನ್ನು ನಿರ್ಮಿಸುವ ಮೂಲಕ ಮುಂದೆ ಯಾವುದೇ ಅಪಘಾತ ಅಂಭವಿಸದಂತೆ ಕ್ರಮವಹಿಸಿಲು ಗ್ರಾಮಸ್ಧರು ಒತ್ತಾಯಿಸಿದರು. ಅಲ್ಲದೇ ಮೃತಪಟ್ಟ ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿದರು.