ಬಿಗಿ ಭದ್ರತೆ ಇದ್ದರು ಆರ್ ಬಿಐ ಕ್ವಾಟ್ರಸ್‍ನ ಮನೆಯಲ್ಲಿ ಕಳ್ಳತನ

Update: 2017-12-10 17:44 GMT

ಮೈಸೂರು, ಡಿ.10: ಭಾರಿ ಭದ್ರತೆಯ ನಡುಯವೆಯೂ ಆರ್ ಬಿಐ ಕ್ವಾಟ್ರಸ್ ನ ಮನೆಯೊಂದರಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಬಿಗಿ ಭದ್ರತೆ ಇದ್ದರೂ ಹೆದರದ ಖದೀಮರು  ಆರ್ ಬಿಐ ನೋಟು ಮುದ್ರಣಾಲಯದ ನೌಕರ ಮಂಜುನಾಥೇಶ್ವರ ಮನೆಯಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ನೋಟು ಮುದ್ರಣಾಲಯದ ವಸತಿ ಗೃಹದ ತಮ್ಮ ನಿವಾಸಕ್ಕೆ ಬೀಗಹಾಕಿ ಹೊರ ಹೋಗಿದ್ದಾಗ ಮನೆಗೆ ಕಳ್ಳರು ನುಗ್ಗಿದ್ದಾರೆ. ನಿನ್ನೆ ರಾತ್ರಿ ಪಕ್ಕದ ಮನೆ  ನಿವಾಸಿಗಳು ಮಂಜುನಾಥೇಶ್ವರ್ ಗೆ ಮಾಹಿತಿ ನೀಡಿದ್ದು, ಮಾಹಿತಿ ತಿಳಿದು  ಮನೆಗೆ ಬಂದಾಗ ಕಳ್ಳತನ ಬೆಳಕಿಗೆ ಬಂದಿದೆ.

 ಡೋರ್ ಲಾಕ್ ಮುರಿದು   ಒಳಹೊಕ್ಕ ಖದೀಮರು ಮನೆಯಲ್ಲಿದ್ದ  120ಗ್ರಾಂ ಚಿನ್ನಾಭರಣ  ಮತ್ತು 2 ಕೆ ಜಿ ಬೆಳ್ಳಿ ಕಳವು ಮಾಡಿದ್ದಾರೆ. ಇಷ್ಟೊಂದು ಭದ್ರತೆ ಇರುವ ಇಂತಹ ಸ್ಥಳವನ್ನೇ  ಕಳ್ಳರು ಬಿಟ್ಟಿಲ್ಲ. ಇನ್ನು ಭದ್ರತೆ ಇಲ್ಲದ ಕಡೆಗಳಲ್ಲಿ ನುಗ್ಗದೇ ಇರಲು ಹೇಗೆ ಸಾಧ್ಯ ಎಂಬ ಮಾತು ಸ್ಥಳೀಯರಿಂದ ಕೇಳಿ ಬಂದಿದೆ. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News