ನೇತ್ರದಾನ ಮಾಡಿ ಸಾವಿನಲ್ಲೂ ಬೆಳಕಾದ ವೆಂಕಟೇಶ್

Update: 2017-12-13 15:10 GMT

ಮಂಡ್ಯ, ಡಿ.13: ಅನಾರೋಗ್ಯದಿಂದ ಮೃತಪಟ್ಟ ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ವಿ.ವೆಂಕಟೇಶ್‍ಕುಮಾರ್ ಬಯಕೆಯಂತೆ ಅವರ ಎರಡು ನೇತ್ರಗಳನ್ನು ಮಂಡ್ಯ ಯೂತ್ ಗ್ರೂಪ್ ಅಧೀನದಲ್ಲಿರುವ  ಡಾ.ರಾಜ್‍ಕುಮಾರ್ ನೇತ್ರ ಸಂಗ್ರಹಣಾ ಸಂಸ್ಥೆಗೆ ಸಂಗ್ರಹಿಸಲಾಯಿತು.

ವೆಂಕಟೇಶ್ ಅವರು 21 ಜುಲೈ 2016ರಂದೇ  ಮಂಡ್ಯ  ಯೂತ್ ಗ್ರೂಪ್‍ನಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಸಿ ಪ್ರಮಾಣಪತ್ರ ಪಡೆದುಕೊಂಡಿದ್ದರು. ಮಂಗಳವಾರ ನಿಧನ ವಿಷಯ ತಿಳಿದ ಗ್ರೂಪ್‍ನ ಅಧ್ಯಕ್ಷ ಡಾ.ಅನಿಲ್ ಆನಂದ್ ಅವರಿಗೆ ತಿಳಿಸಿದರು. ಕೂಡಲೇ ಕಾರ್ಯೋನ್ಮುಖವಾದ ತಂಡ ಮೃತರ ನೇತ್ರಗಳನ್ನು ಸಂಗ್ರಹಿಸಿ ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ಕಳುಹಿಸಿಕೊಡಲಾಯಿತು.

ಕೆಲವೇ ಗಂಟೆಗಳಲ್ಲಿ ಈ ನೇತ್ರಗಳು ಇಬ್ಬರು ಅಂಧರ ಬಾಳಿಗೆ ಬೆಳಕಾದವು ಎಂದು ನಾರಾಯಣ ನೇತ್ರಾಲಯದ ವೈದ್ಯರು ತಿಳಿಸಿದ್ದಾರೆ. ವೆಂಕಟೇಶ್‍ಕುಮಾರ್ ಅವರ ನೇತ್ರ ಸಂಗ್ರಹದೊಂದಿಗೆ ಮಂಡ್ಯ ಯೂತ್ ಗ್ರೂಪ್‍ನಿಂದ ಬೆಳಕು ಕಂಡವರ ಸಂಖ್ಯೆ 22ಕ್ಕೆ ಏರಿದೆ. ಗ್ರೂಪ್‍ನ ಸದಸ್ಯರಾದ ದರ್ಶನ್, ಮಲ್ಲೇಶ್, ವಿನಯ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News