ಮಂಡ್ಯ : ಇಇ ಚಂದ್ರಹಾಸ ಮನೆ ಮೇಲೆ ಎಸಿಬಿ ದಾಳಿ

Update: 2017-12-13 15:16 GMT

ಮಂಡ್ಯ, ಡಿ.13:  ಈ ಹಿಂದೆ  ಜಿಲ್ಲಾ ಪಂಚಾಯತ್‍ನ ಕಾರ್ಯಪಾಲಕರ ಅಭಿಯಂತರ ಆಗಿದ್ದ  ಚಂದ್ರಹಾಸ ಅವರ ನಗರದ ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದರು.

ಮುಂಜಾನೆ ಮೈಸೂರಿನ ಎಸಿಬಿ ಎಸ್ಪಿ ಶೇಖರ್ ನೇತೃತ್ವದಲ್ಲಿ ಆಗಮಿಸಿದ ಅಧಿಕಾರಿಗಳು  ಗಾಂಧಿನಗರದಲ್ಲಿರುವ ಚಂದ್ರಹಾಸ ಅವರ ಮನೆ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ಪರಿಶೀಲಿಸಿದರು.

ಜಿಲ್ಲಾ ಪಂಚಾಯತ್‍ನಲ್ಲಿ ಹಲವು ವರ್ಷಗಳ ಕಾಲ ಕಾರ್ಯಪಾಲಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಹಾಸ ಅವರನ್ನು ಎರಡು ತಿಂಗಳ  ಹಿಂದೆಯಷ್ಟೇ ಬೆಂಗಳೂರಿನ ಪಂಚಾಯತ್ ರಾಜ್ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. 

ಚಂದ್ರಹಾಸ  ಅವರು ಬೆಂಗಳೂರು ಮತ್ತು ಮೈಸೂರಿನಲ್ಲೂ ಮನೆಗಳನ್ನು ಹೊಂದಿದ್ದು, ಏಕ ಕಾಲದಲ್ಲಿಯೂ ಆ ಮನೆಗಳ ಮೇಲೆಯೂ ಎಸಿಬಿ ದಾಳಿ ನಡೆದಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News