ಕೊಳ್ಳೇಗಾಲ : ಕುಮಾರಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಹಣ್ಣು ಹಂಪಲು ವಿತರಣೆ

Update: 2017-12-16 13:05 GMT

ಕೊಳ್ಳೇಗಾಲ.ಡಿ.16: ನಗರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 58ನೇ ಹುಟ್ಟುಹಬ್ಬದ ಸಂಭ್ರಮದ ಅಂಗವಾಗಿ  ಜೆಡಿಎಸ್ ಕಾರ್ಯಕರ್ತರು ಶನಿವಾರ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಅವರ ಹುಟ್ಟುಹಬ್ಬವನ್ನು ಆಚರಿಸಿದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಸಂಭಾವೀಯ ಅಭ್ಯರ್ಥಿ ಮುಳ್ಳೂರು ಶಿವಮಲ್ಲು ಮಾತನಾಡಿ, ಕುಮಾರಸ್ವಾಮಿ ಅವರಿಗೆ ಆರೋಗ್ಯ ಮತ್ತು ಆಯುಷ್ಯ ನೀಡಲಿ ಎಂದು  ಪ್ರಾರ್ಥಿಸುತ್ತೇನೆ. ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ನ ಹೊಸ ಪರ್ವ ಶುರುವಾಗಿದೆ. ಕುಮಾರಣ್ಣನ ಮೇಲಿರುವ ಅಭಿಮಾನದಿಂದ ಎಲ್ಲಾ ಸಮುದಾಯದ ಜನರು ಜೆಡಿಎಸ್ ಕಡೆ ವಾಲುತ್ತಿದ್ದಾರೆ. 

ಜಾತ್ಯಾತೀತ ಮನೋಭಾವದ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ರಾಜ್ಯದ ಜನತೆ ಕಾತುರರಾಗಿದ್ದಾರೆ. ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂದರ್ಭದಲ್ಲಿ ತಾಲ್ಲೂಕು ಹೆಳವರ ಸಂಘದ ಅಧ್ಯಕ್ಷ ಕಾರ್‍ನಾಗಣ್ಣ ನೇತೃತ್ವದಲ್ಲಿ ಅಚ್ಗಾಳ್ ವೃತ್ತದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ನಂತರ ಕಾರ್ಯಕರ್ತರೆಲ್ಲರೂ ಸೇರಿ ಕೇಕ್ ಕತ್ತರಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಆಚರಿಸಿದರು.

ಈ ವೇಳೆ ಪಕ್ಷದ ಮುಖಂಡರಾದ ಅಜೀಕ್ ಪಾಷ, ಬಿರಾಚಯ್ಯ, ಇರ್ಫಾನ್, ನಾಗಸುಂದರ್, ಶಿವಮೂರ್ತಿ, ನಾಗೇಂದ್ರ, ಬಾಲಸುಂದರಸ್ವಾಮಿ, ಮೂರ್ತಿ, ನಿತಿನ್, ಪ್ರಶಾಂತ್, ಆರೀಫ್‍ಪಾಷ, ಪ್ರಭು, ಸ್ವಾಮಿ, ನಾಗೇಂದ್ರ, ವೆಂಕಟಚಾಲ, ಕುಮಾರ್, ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News