ದಾವಣಗೆರೆ: ಬಡತನದ ಕಾರಣದಿಂದ ಮಗುವನ್ನೇ ಮಾರಾಟ ಮಾಡಿದ ಹೆತ್ತವರು

Update: 2017-12-28 17:51 GMT

ದಾವಣಗೆರೆ,ಡಿ.28 ; ಬಡತನದ ಕಾರಣದಿಂದಾಗಿ ಕೇವಲ 20 ಸಾವಿರ ರೂ.ಗೆ ಮೂರು ದಿನದ ಹೆಣ್ಣು ಶಿಶುವನ್ನೇ ಮಾರಾಟ ಮಾಡಲು ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.

ಇಲ್ಲಿನ ಆಜಾದ್ ನಗರದ ಶಬೀನಾ ಹಾಗೂ ಸಿಕಂದರ್ ತಮ್ಮ 3 ದಿನದ ಹೆಣ್ಣು ಮಗುವನ್ನು ಕೇವಲ 20 ಸಾವಿರ ರೂ.ಗೆ ಮುಕ್ತಿಯಾರ್ ಎಂಬ ವ್ಯಕ್ತಿಗೆ ಮಾರಾಟ ಮಾಡಿದ್ದರು. ಮುಕ್ತಿಯಾರ್ ಮಗು ಖರೀದಿ ಮಾಡಿ, ಈತನ ಸಹೋದರಿ ಹುಬ್ಬಳ್ಳಿ ಮೂಲದ ಹಫೀಜಾಭಾನು ಹಾಗೂ ಮುಜೀಬವುಲ್ಲಾ ಅವರಿಗೆ ನೀಡಿದ್ದ. ಈ ಬಗ್ಗೆ ನಿಖರ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಮಗುವನ್ನು ರಕ್ಷಿಸಲಾಗಿದೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗು ಮಾರಾಟ ಮಾಡುತ್ತಿದ್ದ ಪೋಷಕರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News