ಹರಿಹರ: ಬೀದಿನಾಯಿ ಹಾವಳಿಗೆ 20 ಕುರಿಗಳು ಬಲಿ

Update: 2018-01-05 17:37 GMT

ಹರಿಹರ,ಜ.5: ಬೀದಿನಾಯಿಗಳ ಹಾವಳಿಗೆ 20 ಕುರಿ ಮರಿಗಳು ಬಲಿಯಾದ ಘಟನೆ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ನಡೆದಿದೆ. 

ಗ್ರಾಮದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ಹಾವಳಿ ತಡೆಯುವಂತೆ ಒತ್ತಾಯಿಸಿ ಗ್ರಾಮಸ್ಥರು ಹಲವಾರು ಬಾರಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರೂ ಸಹ ಗ್ರಾಪಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ರೈತ ದೇವೇಂದ್ರಪ್ಪ ಅವರಿಗೆ ಸೇರಿದ ಸುಮಾರು 20 ಕುರಿಗಳನ್ನು ಬೀದಿ ನಾಯಿಗಳು ಕೊಂದು ಹಾಕಿವೆ. ಈ ಕೂಡಲೇ ರೈತ ದೇವೇಂದ್ರಪ್ಪರಿಗೆ ಉಂಟಾದ ನಷ್ಟವನ್ನು ಗ್ರಾಮ ಪಂಚಾಯತ್ ಭರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News