ಕರ್ನಾಟಕ ಹನುಮಂತನ ಜನ್ಮಭೂಮಿಯಾಗಿದೆ: ಆದಿತ್ಯನಾಥ್

Update: 2018-01-07 08:23 GMT

ಬೆಂಗಳೂರು, ಜ.7: ಕರ್ನಾಟಕ ಹನುಮಂತನ ಜನ್ಮಭೂಮಿಯಾಗಿದೆ. ಹನುಮಂತ ಸೀತಾಮಾತೆಗೆ ದಾರಿ ತೋರಿಸಿದ್ದ. ಶ್ರೀರಾಮಚಂದ್ರನ ವಿಜಯಕ್ಕೆ ಕಾರಣವಾಗಿದ್ದ. ಹೀಗಾಗಿ  ದೇಶದ ಅಭಿವೃದ್ಧಿಗೆ ಕರ್ನಾಟಕ ಮಾರ್ಗದರ್ಶಿಯಾಗಬೇಕು" ಎಂದು ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ ನಿನ್ನೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೋಡಿದೆ" ನಾನು ಸಹ ಒಬ್ಬ ಹಿಂದು ಎಂದು ಹೇಳಿದ್ದಾರೆ. ನಿಮ್ಮನ್ನು ನೋಡಿ ಅವರು ತಾನು ಹಿಂದು ಎಂದು ಹೇಳಿದ್ದಾರೆ. ಆದರೆ  ಹಿಂದುಗಳು ಎಂದೂ ಗೋ ಹತ್ಯೆಯನ್ನು ಸಹಿಸುವುದಿಲ್ಲ.  ಹಿಂದುವಾಗಿದ್ದರೆ   ಗೋಹತ್ಯೆಗೆ ಬೆಂಬಲ ನೀಡುತ್ತಿರಲಿಲ್ಲ.  ಹಿಂದು ಒಂದು ಧರ್ಮವಲ್ಲ ಅದು ಜೀವನ ಕ್ರಮವಾಗಿದೆ" ಎಂದು ನುಡಿದರು.  

  ಕಾಂಗ್ರೆಸ್ ಸರಕಾರದಿಂದ  ಅಭಿವೃದ್ಧಿ ಸಾಧ್ಯವಿಲ್ಲ. ಐಟಿ ಸಿಟಿ ಬೆಂಗಳೂರು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರಕಾರ ಅಧಿಕಾರದಲ್ಲಿರಬೇಕು" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News