ಹಾಸನ: ಒಂಟಿ ಸಲಗದ ದಾಳಿಗೆ ಬಾಲಕ ಬಲಿ

Update: 2018-01-14 07:15 GMT
ಸಾಂದರ್ಭಿಕ ಚಿತ್ರ

ಹಾಸನ, ಜ.14:  ಮನೆ ಮುಂದೆ ನಿಂತಿದ್ದ ಹದಿನಾಲ್ಕರ ಹರೆಯದ ಬಾಲಕನನ್ನು ಆನೆಯೊಂದು ಹೊತ್ತೊಯ್ದು ಕೊಂದು ಹಾಕಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕೊಡಗವತ್ತವಳ್ಳಿ ಗ್ರಾಮದಲ್ಲಿ ನಡೆದಿದೆ
14 ವರ್ಷದ ಭರತ್  ಎಂಬಾತನನ್ನು ಆನೆ ಎಳೆದೊಯ್ದು ಸಾಯಿಸಿದೆ.  ತಾಯಿ ಜೊತೆಗೆ ಇತ್ತೀಚೆಗಷ್ಟೇ  ಸಂಕ್ರಾಂತಿ ಹಬ್ಬದ ಅಂಗವಾಗಿ ಬಾಲಕ ಭರತ್ ಅಜ್ಜಿ ಜಯಮ್ಮನ ಮನೆಗೆ ಬಂದಿದ್ದನು. ಬಾಲಕ ಭರತ್ ನನ್ನು ಮನೆಯ ಬಳಿಯಿಂದ ಆನೆ  ಹೊತ್ತೊಯ್ದಿದೆ.

ಮನೆ ಮುಂದೆ ಆಡುತ್ತಿದ್ದ ಬಾಲಕ ಕಾಣದೇ ಇದ್ದಾಗ  ಗಾಬರಿಗೊಂಡ  ತಾಯಿ ಮತ್ತು ಅಜ್ಜಿ ಜಯಮ್ಮ ಭರತ್ ನಿಗಾಗಿ  ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮೃತ ಭರತ್ ನ ಮೃತದೇಹ ಮನೆಯ ಸಮೀಪವೆ ಪತ್ತೆಯಾಗಿದೆ.

ಮೃತ ಬಾಲಕ ಭರತ್ ನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News