ಹಾನಗಲ್ ನಲ್ಲಿ ರಸ್ತೆ ಅಪಘಾತ: ಟಿವಿ ವರದಿಗಾರ ಮೃತ್ಯು

Update: 2018-01-14 11:39 GMT

ಶಿರಸಿ, ಜ.14: ಬೈಕೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಕಾರಣ ಟಿ.ವಿ. ವರದಿಗಾರನೋರ್ವ ಮೃತಪಟ್ಟ ಘಟನೆ ಶನಿವಾರ ಮಧ್ಯ ರಾತ್ರಿ ನಡೆದಿದೆ.

ಮೃತರನ್ನು  ಟಿ.ವಿ.  ಚಾನೆಲ್ ಒಂದರ ವರದಿಗಾರ ಮೌನೇಶ ಪೋತರಾಜ ಎಂದು ಗುರುತಿಸಲಾಗಿದೆ.

ಶಿರಸಿಯಲ್ಲಿ ನಡೆದ ಕಾರ್ಯಕ್ರಮವೊಂದರ ವರದಿ ಮಾಡಿ ರಾತ್ರಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಛಬ್ಬಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭ ಹಾನಗಲ್ ತಾಲೂಕಿನ ಮಹಾರಾಜ ಪೇಟೆಯ ಸಮೀಪ ಇರುವ ತಿರುವಿನಲ್ಲಿ ಬೈಕ್ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೌನೇಶ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಹಾನಗಲ್ ಠಾಣೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News