ಚಿಕ್ಕಮಗಳೂರು: ಶಾಸಕ ನಿಂಗಯ್ಯರ ಕಾರು ಅಪಘಾತ

Update: 2018-01-14 13:18 GMT

ಚಿಕ್ಕಮಗಳೂರು, ಜ.14: ಶೃಂಗೇರಿಯತ್ತ ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ತೆರಳುತ್ತಿದ್ದ ಕಾರು ಬಾಡಿಗೆ ಆಟೋ ರಿಕ್ಷಾ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರು ಮತ್ತು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿರುವ ಘಟನೆ ಕೊಪ್ಪ ತಾಲೂಕಿನ ಹೆರೂರು ಎಂಬಲ್ಲಿ ಭಾನುವಾರ ಸಂಭವಿಸಿದೆ.

ಅಪಘಾತದ ವೇಳೆ ಶಾಸಕ ಬಿ.ಬಿ.ನಿಂಗಯ್ಯ ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ. ಅವಘಡದ ರಭಸಕ್ಕೆ ಕಾರಿನ ಮುಂಬಾಗ ಜಖಂಗೊಂಡಿದೆ. ಆಟೋ ರಿಕ್ಷಾವು ಸಂಪೂರ್ಣ ನಜ್ಜುಗುಜ್ಜಾಗಿದೆ.

ಶಾಸಕ ಬಿ.ಬಿ.ನಿಂಗಯ್ಯ ಶೃಂಗೇರಿ ದೇಗುಲದಲ್ಲಿ ದೇವೇಗೌಡ ಕುಟುಂಬವು ನಡೆಸುತ್ತಿದ್ದ ಕುಮಾರಪರ್ವ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.

ಬಾಡಿಗೆ ಆಟೋ ರಿಕ್ಷದಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಮತ್ತು ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಅವರನ್ನು ತಕ್ಷಣ ಕೊಪ್ಪ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಘಟನೆ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News