ಚಪ್ಪಲಿ ಕಾಣದೆ ಪರದಾಡಿದ ಉಪರಾಷ್ಟ್ರಪತಿ..!

Update: 2018-01-19 06:07 GMT

ಬೆಂಗಳೂರು, ಜ.19: ಸಂಸದ  ಪಿ.ಸಿ ಮೋಹನ್ ನಿವಾಸಕ್ಕೆ ಆಗಮಿಸಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಚಪ್ಪಲಿ ಕಾಣದೆ ಪರದಾಡಿದ ಘಟನೆ ಇಂದು ಬೆಳಕಿಗೆ ಬಂದಿದೆ.

ಸಂಸದ  ಪಿ.ಸಿ ಮೋಹನ್ ಅವರ ನಿವಾಸಕ್ಕೆ ವೆಂಕಯ್ಯ ನಾಯ್ಡು ಆಗಮಿಸಿದ್ದರು. ಮನೆಯ ಒಳಗೆ ಪ್ರವೇಶಿಸುವಾಗ ಚಪ್ಪಲಿಯನ್ನು ಹೊರಗಿಟ್ಟು ಬಂದಿದ್ದರು. ಮತ್ತೆ ಹೊರಬರುವಷ್ಟರಲ್ಲಿ ಅವರ ಚಪ್ಪಲಿ ಕಾಣೆಯಾಗಿತ್ತು. ಸಿಬ್ಬಂದಿ ಚಪ್ಪಲಿಗಾಗಿ ಹುಡುಕಾಟ ನಡೆಸಿದರೂ ಫಲಕಾರಿಯಾಗಲಿಲ್ಲ. ಚಪ್ಪಲಿಯನ್ನು ಯಾರೋ ಎಗರಿಸಿದ್ದರು.

ಕೊನೆಗೆ ಹೊಸ ಚಪ್ಪಲಿ ತರಿಸಿ  ವೆಂಕಯ್ಯ ನಾಯ್ಡು ಅಲ್ಲಿಂದ ಹೊರಟರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News