ಆಪ್ ನ 20 ಶಾಸಕರನ್ನು ಅನರ್ಹಗೊಳಿಸಿದ ಚುನಾವಣಾ ಆಯೋಗ
Update: 2018-01-19 09:55 GMT
ಹೊಸದಿಲ್ಲಿ ,ಜ.19: ಲಾಭದಾಯಕ ಹುದ್ದೆ ಹೊಂದಿದ್ದ ದಿಲ್ಲಿಯ ಆಮ್ ಆದ್ಮಿ ಪಕ್ಷದ(ಆಪ್) 20 ಶಾಸಕರನ್ನು ಚುನಾವಣಾ ಆಯೋಗವು ಅನರ್ಹಗೊಳಿಸಿ ರಾಷ್ಟ್ರಪತಿಗೆ ಶಿಪಾರಸ್ಸು ಮಾಡಿದೆ.
ಇದರೊಂದಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರಕಾರಕ್ಕೆ ಹಿನ್ನೆಡೆಯಾಗಿದೆ. ಈ ಕಾರಣದಿಂದಾಗಿ ತೆರವಾಗುವ ಸ್ಥಾನಕ್ಕೆ ಉಪ ಚುನಾವಣೆ ಎದುರಾಗುವ ಸಾಧ್ಯತೆ ಇದೆ.
ಇದು ಮೋದಿ ನೇಮಕಗೊಳಿಸಿದ ಚುನಾವಣಾ ಆಯೋಗ: ಚುನಾವಣಾ ಆಯೋಗದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ.ಇದು ಪ್ರಧಾನಿ
ಮೋದಿ ನೇಮಕಗೊಳಿಸಿದ ಚುನಾವಣಾ ಆಯೋಗ. ಚುನಾವಣಾ ಆಯೋಗ ಶಾಸಕರ ಅನರ್ಹಗೊಳಿಸುವ ವಿಚಾರದಲ್ಲಿ ಚುನಾವಣಾ ಆಯೋಗ ಏಕಪಕ್ಷೀಯವಾಗಿ ನಡೆದುಕೊಂಡಿದೆ.ಶಾಸಕರಿಗೆ ಅಭಿಪ್ರಾಯ ಮಂಡಿಸಲು ಅವಕಾಶ ನೀಡಿಲ್ಲ ಎಂದು ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೇಟ್ ನೀಡಿದ್ದಾರೆ