ಶಿರಾಡಿ ಘಾಟ್ ವಾಹನ ಸಂಚಾರ ನಿಷೇಧ: ಪರ್ಯಾಯ ಮಾರ್ಗದ ವಿಂಗಡಣೆ

Update: 2018-01-27 16:51 GMT

ಚಿಕ್ಕಮಗಳೂರು ಜ.27: ರಾಷ್ಟ್ರೀಯ ಹೆದ್ದಾರಿ 48(75) ರ ಶಿರಾಡಿಘಾಟ್ ರಸ್ತೆಯ ಕಿ.ಮೀ 238.950 (ಮಾರನಹಳ್ಳಿ ಪೊಲೀಸ್ ಔಟ್ ಪೋಸ್ಟ್ ಕಾಡುಮನೆ ಎಸ್ಟೇಟ್ ರೋಡ್ ಜಂಕ್ಷನ್) ಸಕಲೇಶಪುರ ತಾಲ್ಲೂಕು, ಹಾಸನ ಜಿಲ್ಲೆಯಿಂದ 261.500 (ಗುಂಡ್ಯ) ಪುತ್ತೂರು ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆಯವರೆಗೆ ಹೆದ್ದಾರಿ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜನವರಿ 20 ರ ಬೆಳಿಗ್ಗೆ 6 ಗಂಟೆಯಿಂದ ಕಾಮಗಾರಿ ಮುಕ್ತಾಯವಾಗುವರೆಗೆ ಅಥವಾ ಮುಂದಿನ ಆದೇಶದವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ. 

ಪರ್ಯಾಯ ಮಾರ್ಗವಾಗಿ ಎ ವರ್ಗದ ಲಘು ವಾಹನಗಳಾದ ಸಾಮಾನ್ಯ ಬಸ್, ಜೀಪು, ವ್ಯಾನು, ಎಲ್.ಸಿ.ವಿ (ಮಿನಿ ವ್ಯಾನ್) ದ್ವಿಚಕ್ರ ವಾಹನಗಳು ಹಾಗೂ ಬಿ ವರ್ಗದ ರಾಜಹಂಸ, ಐರಾವತ ಬಸ್ಸುಗಳು ಮತ್ತು ಖಾಸಗಿ ಲಕ್ಸುರಿ ಬಸ್ಸುಗಳು ಮತ್ತು ಬುಲೆಟ್ ಟ್ಯಾಂಕರ್ಸ್, ಷಿಪ್, ಕಾರ್ಗೊ ಕಂಟೈನರ್ಸ್, ಲಾಂಗ್ ಚಾಸೀಸ್ ವಾಹನಗಳಾಗಿ ವಿಂಗಡಿಸಲಾಗಿದ್ದು, 
ಎ ವರ್ಗದ ವಾಹನಗಳನ್ನು ಹಾಸನ ಬೇಲೂರು (ರಾಜ್ಯ ಹೆದ್ದಾರಿ-57)-ಮೂಡಿಗೆರೆ-ಚಾರ್ಮುಡಿಘಾಟ್-ಬೆಳ್ತಂಗಡಿ-ಉಜಿರೆ-ಬಿ.ಸಿ.ರಸ್ತೆ (ರಾಷ್ಟ್ರೀಯ ಹೆದ್ದಾರಿ 234)-ಮಂಗಳೂರು (ರಾಷ್ಟ್ರೀಯ ಹೆದ್ದಾರಿ 75) ಮಾರ್ಗವಾಗಿ.
ಹಾಸನ-ಸಕಲೇಶಪುರ-ಆನೇಮಹಲ್ (ರಾಷ್ಟ್ರೀಯ ಹೆದ್ದಾರಿ-75) ಹಾನ್‍ಬಾಳ್-ಚೆನ್ನಾಪುರ (ರಾಜ್ಯ ಹೆದ್ದಾರಿ-27), ಮೂಡಿಗೆರೆ-ಚಾರ್ಮುಡಿ ಘಾಟ್-ಬೆಳ್ತಂಗಡಿ-ಉಜಿರೆ-ಬಿ.ಸಿ.ರಸ್ತೆ (ರಾಷ್ಟ್ರೀಯ ಹೆದ್ದಾರಿ 234)-ಮಂಗಳೂರು (ರಾಷ್ಟ್ರೀಯ ಹೆದ್ದಾರಿ 75) ಮಾರ್ಗವಾಗಿ ಹಾಗೂ ಬೆಂಗಳೂರು-ಹಾಸನ-ಮೂಡಿಗೆರೆ-ಕೊಟ್ಟಿಗೆಹಾರ, ಕಳಸ-ಕುದುರೆಮುಖ-ಮಾಲಘಾಟ್-ಕಾರ್ಕಳ-ಉಡುಪಿ ಮಾರ್ಗವಾಗಿ ಚಲಿಸಬಹುದಾಗಿದೆ. 

ಬಿ ವರ್ಗದ ವಾಹನಗಳು 

ಮಂಗಳೂರು-ಬಿ.ಸಿ.ರಸ್ತೆ ಮಾಣಿ (ರಾಷ್ಟ್ರೀಯ ಹೆದ್ದಾರಿ 75) ಪುತ್ತೂರು-ಮಡಿಕೇರಿ ಹುಣಸೂರು (ರಾಷ್ಟ್ರೀಯ ಹೆದ್ದಾರಿ-275)-ಕೆ.ಆರ್.ನಗರ-ಹೊಳೆನರಸೀಪುರ-ಹಾಸನ (ರಾಜ್ಯ ಹೆದ್ದಾರಿ 57) ಮಾರ್ಗವಾಗಿ ಹಾಗೂ  ಬೆಂಗಳೂರು-ನೆಲಮಂಗಲ-ಶಿವಮೊಗ್ಗ-ಸಾಗರ-ಹೊನ್ನಾವರ-ಮುರುಡೇಶ್ವರ-ಕುಂದಾಪುರ-ಉಡುಪಿ-ಮಂಗಳೂರು ಮಾರ್ಗವಾಗಿ ಚಲಿಸಬಹುದಾಗಿದೆ. 

ಎ ಹಾಗೂ ಬಿ ವರ್ಗದ ವಾಹನಗಳು
ಮಂಗಳೂರು-ಬಿ.ಸಿ.ರಸ್ತೆ ಮಾಣಿ (ರಾಷ್ಟ್ರೀಯ ಹೆದ್ದಾರಿ-75)-ಪುತ್ತೂರು-ಮಡಿಕೇರಿ-ಹುಣಸೂರು (ರಾಷ್ಟ್ರೀಯ ಹೆದ್ದಾರಿ 275)-ಮೈಸೂರು-ಮಂಡ್ಯ-ರಾಮನಗರ-ಬೆಂಗಳೂರು ಮಾರ್ಗವಾಗಿ ಹಾಗೂ  ಬೆಂಗಳೂರು-ನೆಲಮಂಗಲ-ಶಿವಮೊಗ್ಗ-ಸಾಗರ-ಹೊನ್ನಾವರ-ಮುರುಡೇಶ್ವರ-ಕುಂದಾಪುರ-ಉಡುಪಿ-ಮಂಗಳೂರು ಮಾರ್ಗವಾಗಿ ಚಲಿಸಬಹುದಾಗಿದೆ ಎಂದು  ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಹೈವೆ ಅಡ್ಮಿನಿಸ್ಟ್ರೇಟರ್ ಮತ್ತು ಎಕ್ಸಿಕ್ಯೂಟಿವ್ ಇಂಜಿನಿಯರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News