ಕೊಳ್ಳೇಗಾಲ: ಬೈಕಿನಿಂದ ಬಿದ್ದು ಸವಾರ ಮೃತ್ಯು

Update: 2018-01-28 17:03 GMT

ಕೊಳ್ಳೇಗಾಲ,ಜ.28: ಬೈಕ್ ಚಾಲನೆ ವೇಳೆ ನಾಯಿ ಅಡ್ಡ ಬಂದ ಕಾರಣ ಆಯತಪ್ಪಿ ಬಿದ್ದು ಬೈಕ್ ಸವಾರನು ಮೃತಪಟ್ಟಿರುವ ಘಟನೆ ಗ್ರಾಮಾಂತರ ಠಾಣೆಯಲ್ಲಿ ಶನಿವಾರ ನಡೆದಿದೆ.

ಮಳ್ಳವಳ್ಳಿ ತಾಲ್ಲೂಕಿನ ಉಪಾರಗೇರಿಕೊಪ್ಪಲು ಗ್ರಾಮದ ರಘು(26) ಎಂಬಾತನು ಮೃತಪಟ್ಟಿರುವ ವ್ಯಕ್ತಿ.

ಮಳ್ಳವಳ್ಳಿ ಕಡೆಯಿಂದ ಕೊಳ್ಳೇಗಾಲಕ್ಕೆ ಆಗಮಿಸುತ್ತಿದ್ದ ವೇಳೆ ತಾಲೂಕಿನ ಧನಗೆರೆ ಗ್ರಾಮದ ಬಳಿ ನಾಯಿಯೊಂದು ಬೈಕ್‍ಗೆ ಅಡ್ಡ ಬಂದಿದೆ. ಇದರಿಂದಾಗಿ ಆಯತಪ್ಪಿ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದ ಸವಾರನನ್ನು ಸಮೀಪವಿದ್ದ ಗಾಮಸ್ಥರು ಪಟ್ಟಣದ ಸಕಾರಿ ಆಸ್ಪತ್ರೆಗೆ ಚಿಕಿತ್ಸೆ ನೀಡಲು ಸೇರಿಸಿದರು. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. 

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಂಡು ಸಿಪಿಐ ರಾಜಣ್ಣ ಮತ್ತು ಎಸ್‍ಐ ವನರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಾಗಾರದಲ್ಲಿ ಶವಪರೀಕ್ಷೆ ನಡೆಸಿ ನಂತರ ಅವರ ವಾರಸುದಾರರಿಗೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News