ಓ ಮೆಣಸೇ..

Update: 2018-01-29 05:58 GMT

ನಮ್ಮ ಸೇನೆ ಗಡಿಯಾಚೆಗೂ ನುಗ್ಗಬಲ್ಲುದು - ರಾಜನಾಥ್ ಸಿಂಗ್, ಕೇಂದ್ರ ಸಚಿವ

ಗಡಿದಾಟಿ ದಾಳಿ ನಡೆಸುತ್ತಿರುವ ಪಾಕಿಸ್ತಾನಿ ಸೈನಿಕರ ಕುರಿತಂತೆ ಸ್ಪಷ್ಟೀಕರಣ ನೀಡಿ.

---------------------

ಪ್ರಧಾನಿ ಮೋದಿ ಸಾಮಾಜಿಕ ವಿಜ್ಞಾನಿ - ರಾಮನಾಥ್ ಕೋವಿಂದ್, ರಾಷ್ಟ್ರಪತಿ

ಆ ವಿಜ್ಞಾನಿಯ ಲ್ಯಾಬ್‌ನಲ್ಲಿ ಸೃಷ್ಟಿಯಾದವರಲ್ಲವೇ ನೀವು?

---------------------

ಹಿಂದೂ ಭಾವನೆ ಮರೆತು ಹೋದರೆ ಭಾರತ ಛಿದ್ರಗೊಳ್ಳುತ್ತದೆ - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಭಾರತೀಯ ಎನ್ನುವ ಭಾವನೆ ಮರೆತರೂ ಪರವಾಗಿಲ್ಲವೇ?

---------------------

ಸಿಎಂ ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ನಿರ್ಮಿಸಿರುವ ಹೊಸ ಜೈಲಿಗೆ ಹೋಗಲಿದ್ದಾರೆ - ಪ್ರಕಾಶ್ ಜಾವೇಡ್ಕರ್, ಬಿಜೆಪಿ ನಾಯಕ

ಹಳೆ ಜೈಲುಗಳೆಲ್ಲ ಬಿಜೆಪಿ ನಾಯಕರಿಂದ ಭರ್ತಿಯಾಗಿವೆ ಎನ್ನುವ ಕಾರಣಕ್ಕಾಗಿಯೇ?

---------------------

ಬಿಜೆಪಿಯನ್ನು ಸೋಲಿಸುವ ಸಲುವಾಗಿ ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವುದಿಲ್ಲ - ಸೀತಾರಾಮ್ ಯೆಚೂರಿ, ಸಿಪಿಐಎಂ ನಾಯಕ

ಹಾಗಾದರೆ ಬಿಜೆಪಿಯನ್ನು ಗೆಲ್ಲಿಸುವ ಸಲುವಾಗಿ ಯಾರ ಜೊತೆ ಕೈ ಜೋಡಿಸುತ್ತೀರಿ?

---------------------

ಪೊಲೀಸರ ಮೇಲೆ ಯಾರೇ ಹಲ್ಲೆ ನಡೆಸಿದರೂ ಪ್ರತಿಯಾಗಿ ಪೊಲೀಸರು ಗುಂಡುಹಾರಿಸಬೇಕು - ರಾಮಲಿಂಗಾರೆಡ್ಡಿ, ಸಚಿವ

ಶ್ರೀಸಾಮಾನ್ಯನ ಮೇಲೆ ಹಲ್ಲೆ ನಡೆಸಿದರೆ ಪರವಾಗಿಲ್ಲವೇ?

---------------------

ಕಂಬಳದ ಕೋಣಗಳನ್ನು ಅದರ ಮಾಲಕರು ತಮ್ಮ ಮಕ್ಕಳಂತೆ ಪೋಷಿಸಿ, ಪ್ರೀತಿ ತೋರುತ್ತಾರೆ. - ಎ.ಮಂಜು, ಸಚಿವ

ತಮ್ಮ ಮಕ್ಕಳನ್ನು ಅವರು ಕಂಬಳದ ಕರೆಯಲ್ಲಿ ಬೆತ್ತ ಹಿಡಿದು ಓಡಿಸಿದ ಉದಾಹರಣೆ ಎಲ್ಲೂ ಇಲ್ಲ.

---------------------

ಗೋಹತ್ಯೆ ನರಹತ್ಯೆಗಿಂತಲೂ ಘೋರ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

ಗೋವುಗಳನ್ನು ಹತ್ಯೆ ಮಾಡದೆಯೇ ಮಾಂಸ ರಫ್ತು ಮಾಡುತ್ತಿರುವ ಏಕೈಕ ದೇಶ ಭಾರತ.

---------------------

ಸಿಎಂ ಸಿದ್ದರಾಮಯ್ಯರಿಗೆ ಆರೆಸ್ಸೆಸ್, ವಿಎಚ್‌ಪಿ, ಬಜರಂಗದಳ ಎಂದರೆ ಏನು ಎಂದೇ ಗೊತ್ತಿಲ್ಲ. - ಕೋಟ ಶ್ರೀನಿವಾಸ ಪೂಜಾರಿ, ವಿ.ಪ. ಸದಸ್ಯ

ಏನು ಎಂದು ಗೊತ್ತಿದ್ದಿದ್ದರೆ ಇಷ್ಟು ಹೊತ್ತಿಗೆ ನಿಮ್ಮ ಕಾರ್ಯಕರ್ತರು ಜೈಲಲ್ಲಿರುತ್ತಿದ್ದರು.

---------------------

ಕಾಂಗ್ರೆಸ್ ಅನಿವಾರ್ಯತೆಯ ಧ್ವನಿ ದೇಶದ ನಾಲ್ಕು ದಿಕ್ಕುಗಳಲ್ಲಿಯೂ ಮೇಳೈಸುತ್ತಿದೆ - ಆಸ್ಕರ್ ಫೆರ್ನಾಂಡಿಸ್, ಕಾಂಗ್ರೆಸ್ ಮುಖಂಡ

ಆದರೆ ಕಾಂಗ್ರೆಸ್‌ಗೆ ನಿಮ್ಮ ಅನಿರ್ವಾಯತೆಯ ಕುರಿತಂತೆ ಅಸಮಾಧಾನವಿದೆ.

---------------------

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದರೆ ನಾವು ಚಿಕ್ಕವರಾಗುತ್ತೇವೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಕೇಸು ದಾಖಲಿಸಬಹುದಲ್ಲ?

---------------------

ನನ್ನ ‘ನಾಯಿ’ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ - ಅನಂತಕುಮಾರ ಹೆಗಡೆ, ಕೇಂದ್ರ ಸಚಿವ

ನಿಮ್ಮ ನಾಯಿಯ ಬಳಿ ಇನ್ನೊಮ್ಮೆ ಸರಿಯಾದ ಹೇಳಿಕೆ ನೀಡಲು ತಿಳಿಸಿ.

---------------------

ಕಾಂಗ್ರೆಸ್ ಪಕ್ಷ ಕೂಡ ‘ಕಾಂಗ್ರೆಸ್ ಸಂಸ್ಕೃತಿ’ಯಿಂದ ಮುಕ್ತಗೊಳ್ಳಬೇಕು - ನರೇಂದ್ರ ಮೋದಿ, ಪ್ರಧಾನಿ

ಬಿಜೆಪಿ ಕ್ರಿಮಿನಲ್ ಸಂಸ್ಕೃತಿಯಿಂದ ಮುಕ್ತವಾಗುವುದು ಯಾವಾಗ?

---------------------

ಜೆಡಿಎಸ್ ಒಂದು ‘ಸರ್ಕಸ್ ಕಂಪೆನಿ’ ಇದ್ದಂತೆ - ಸಿಟಿ ರವಿ, ಶಾಸಕ

ಜೋಕರ್ ಒಬ್ಬರ ಕೊರತೆ ಇದೆಯಂತೆ. ನೀವು ಪ್ರಯತ್ನಿಸಬಹುದು.

---------------------

ಕಾಂಗ್ರೆಸ್ ನಡೆ ಮನೆ ಕಡೆಗೆ - ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

ಬಿಜೆಪಿಯ ಜೈಲಿನ ಕಡೆ ನಡಿಗೆಗಿಂತ ವಾಸಿ.

---------------------

ನನ್ನ ಆತ್ಮಕತೆಯಿಂದ ಯಾರಿಗಾದರೂ ನೋವಾದರೆ ಅದಕ್ಕೆ ನಾನು ಹೊಣೆಯಲ್ಲ - ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ

ನಾರಾಯಣ ಗುರುಗಳು ಮಾತ್ರ ನಿಮ್ಮ ಆತ್ಮಕತೆ ಓದಿ ನಕ್ಕು ಬಿಟ್ಟರಂತೆ.

---------------------

ನನ್ನ ಮಾತು ಮೀರಿ 2006ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡದ್ದಕ್ಕಾಗಿ ಕುಮಾರಸ್ವಾಮಿ ಈಗಲೂ ಪಶ್ಚಾತ್ತಾಪ ಪಡುತ್ತಿದ್ದಾರೆ - ದೇವೇಗೌಡ, ಮಾಜಿ ಪ್ರಧಾನಿ

ಅದಕ್ಕಾಗಿ ಈ ಬಾರಿ ನಿಮ್ಮ ಒಪ್ಪಿಗೆ ಪಡೆದುಕೊಂಡೇ ಬಿಜೆಪಿ ಜೊತೆ ಮೈತ್ರಿ ಮಾಡುವ ಸಿದ್ಧತೆಯಲ್ಲಿದ್ದಾರೆ.

---------------------

ಸಚಿವ ಅನಂತಕುಮಾರ್ ಹೆಗಡೆ ದಲಿತರನ್ನು ನಾಯಿಗಳು ಎಂದು ಕರೆದದ್ದು ಸರಿಯಲ್ಲ - ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಕಚ್ಚುವುದಿಲ್ಲ ಎಂಬ ಧೈರ್ಯದಿಂದ ಇರಬೇಕು.

---------------------

ಬಾಹುಬಲಿ ಮಹಾಕಾವ್ಯ ಬರೆಯಲು ಒಂದು ವರ್ಷ ಮೀನು ಸೇವನೆ ತ್ಯಜಿಸಿದ್ದೇನೆ - ವೀರಪ್ಪ ಮೊಯ್ಲಿ, ಸಂಸದ

ಬಟ್ಟೆ ತ್ಯಜಿಸಿದ್ದೇನೆ ಎಂದು ಹೇಳಲಿಲ್ಲವಲ್ಲ, ಪುಣ್ಯ.

---------------------

ಹೊಸ ಹಕ್ಕಿಗಳು (ರಜನಿಕಾಂತ್, ಕಮಲ್‌ಹಾಸನ್) ಹಾರಲು ಬಯಸುತ್ತವೆ ಆದರೆ ಅವು ಹೆಚ್ಚು ದೂರ ಹಾರದು - ಎಂ.ಕೆ. ಸ್ಟಾಲಿನ್, ಡಿಎಂಕೆ ಮುಖಂಡ

ರಣಹದ್ದುಗಳು ಎಷ್ಟು ಎತ್ತರ ಹಾರಿದರೂ ಏನು ಪ್ರಯೋಜನ?

---------------------

ಬಿಜೆಪಿಯವರು ಇನ್ನು ಮುಂದೆ ಸುಳ್ಳು ಹೇಳಿದರೆ ಸುಮ್ಮನಿರುವುದಿಲ್ಲ - ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ

ಪ್ರತಿಯಾಗಿ ನೀವು ಅವರಿಗಿಂತ ದೊಡ್ಡ ಸುಳ್ಳು ಹೇಳಲು ತಯಾರಿಯೇ?

---------------------

ಚುನಾವಣೆ ಘೋಷಣೆಯಾದ ತಕ್ಷಣ ಬಿಜೆಪಿ ಸೇರುತ್ತೇನೆ - ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕ

ಮತ್ತು ತ್ಯಜಿಸುವ ದಿನವನ್ನೂ ಹೇಳಿ ಬಿಡಿ.

---------------------

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಆರೆಸ್ಸೆಸ್ ದ್ವೇಷಿಯಾಗಿರಲಿಲ್ಲ - ಎಲ್.ಕೆ. ಅಡ್ವಾಣಿ, ಬಿಜೆಪಿ ಮುಖಂಡ

ಆರೆಸ್ಸೆಸ್ ಬಹುಶಃ ಶಾಸ್ತ್ರಿಯ ದ್ವೇಷಿಯಾಗಿತ್ತು ಎಂದು ಕಾಣುತ್ತದೆ.

---------------------

ನಾನೇನು ಎಂಬುದು ಜನರಿಗೆ ಗೊತ್ತಿದೆ - ಸಿದ್ದರಾಮಯ್ಯ, ಮುಖ್ಯಮಂತ್ರಿ

ಆದುದರಿಂದಲೇ ಕಾಂಗ್ರೆಸ್ ನಾಯಕರಿಗೆ ಒಳಗೊಳಗೆ ಭಯ.
 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...