ದೇಶದ ಪ್ರಗತಿಗೆ ವಿಜ್ಞಾನ ಅತ್ಯವಶ್ಯಕ: ಮರಿತಿಬ್ಬೇಗೌಡ

Update: 2018-01-29 17:43 GMT

ಮಂಡ್ಯ, ಜ.29: ದೇಶದ ಪ್ರಗತಿಗೆ ವಿಜ್ಞಾನ ಅತ್ಯವಶ್ಯಕ, ವಿಜ್ಞಾನವಿಲ್ಲದೇ ದೇಶದ ಅಭಿವೃದ್ದಿ ಅಸಾಧ್ಯ. ಆದ್ದರಿಂದ ವಿಜ್ಞಾನ ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳು ಉಪಯುಕ್ತ ಎಂದು ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಅಭಿಪ್ರಾಯಪಟ್ಟರು. 

ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಸೊಮವಾರ ಆಯೋಜಿಸಿದ್ದ ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಇನ್‍ಸ್ಪೆರ್ ಅವಾರ್ಡ್ ಪಡೆದ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು 

ವಸ್ತುಪ್ರದರ್ಶನಗಳು ವಿಜ್ಞಾನದ ಬಗ್ಗೆ ಆಸಕ್ತ ಮೂಡಿಸಲು ಸಹಕಾರಿಯಾಗಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ, ಪ್ರೌಢಶಾಲೆಯ ಹಂತದಲ್ಲಿ ವಿಜ್ಞಾನದ ಮಹತ್ವ ತಿಳಿಸಬೇಕು ಎಂದು ಅವರು ಸಲಹೆ ನೀಡಿದರು.

ಅಬ್ದುಲ್‍ಕಲಾಂ ಅವರ ಸಾಧನೆ ಭಾರತದ ಪ್ರಗತಿಗೆ ಪೂರಕವಾಗಿದೆ. ವಿಜ್ಞಾನದಿಂದ ವಿದ್ಯಾರ್ಥಿಗಳ ಬದುಕು ರೂಪಗೊಂಡು ಸಮಾಜ ಮುಖಿಯಾಗಿರುತ್ತದೆ. ಆದ್ದರಿಂದ ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತ ರೂಢಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಡಯಟ್ ಉಪನಿರ್ದೇಶಕಿ ಭಾರತಿ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಉಪನ್ಯಾಸಕರಾದ ಮಹದೇವ, ಚಂದ್ರಶೇಖರ್, ದೇವರಾಜು, ಶಿವರಾಮು ಚಂದ್ರು, ಹೆಚ್.ಡಿ.ಮಹೇಶ್, ಶಂಕರ್, ರಾಜೇಂದ್ರ, ಗೋಪಾಲಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News