ಕೊಳ್ಳೇಗಾಲ: ಶಾದಿಮಹಲ್ ನಿರ್ಮಾಣಕ್ಕೆ ನಿವೇಶನ ಕೊಡಿಸಿದ ಶಾಸಕರಿಗೆ ಸನ್ಮಾನ

Update: 2018-02-01 17:14 GMT

ಕೊಳ್ಳೇಗಾಲ.ಫೆ.1: ಹನೂರು ಕ್ಷೇತ್ರದ ಆರ್.ಎಸ್ ದೊಡ್ಡಿ ಗ್ರಾಮದಲ್ಲಿ ಶಾದಿಮಹಲ್ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ನಿವೇಶನ ಕೊಡಿಸಿದ ಹನೂರು ಶಾಸಕ ಆರ್.ನರೇಂದ್ರ ಅವರಿಗೆ ಮುಸ್ಲಿಂ ಮುಖಂಡರು ಸನ್ಮಾನಿಸಿ ಗೌರವಿಸಿದರು.

ಪಟ್ಟಣದ ಶಾಸಕರ ಗುರುವಾರ ನಿವಾಸಕ್ಕೆ ಮುಸ್ಲಿಂ ಮುಖಂಡರು ಆಗಮಿಸಿ ಶಾಸಕ ಆರ್.ನರೇಂದ್ರ ಅವರಿಗೆ ಸಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದರು.

ನಂತರ ಶಾಸಕ ಆರ್.ನರೇಂದ್ರ ಮತನಾಡಿ, ಹನೂರು ವ್ಯಾಪ್ತಿಯ ಮುಸ್ಲಿಂ ಜನಾಂಗದವರಿಗೆ ಶುಭ ಸಮಾರಂಭ ಹಾಗೂ ಸಭೆಗಳನ್ನು ನಡೆಸಲು ಕಟ್ಟಡ ಇರಲ್ಲಿಲ. ಅಲ್ಲಿನ ಮುಸ್ಲಿಂ ಮುಖಂಡರುಗಳು ಹಲವಾರು ವರ್ಷಗಳಿಂದ ನಿವೇಶನ ಕೊಡಿಸುವಂತೆ ಮನವಿ ನೀಡಿದ್ದ ಕಾರಣದಿಂದ ಆರ್.ಎಸ್ ದೊಡ್ಡಿಯಲ್ಲಿ 43 ಸೆಂಟ್‍ನಲ್ಲಿ ನಿವೇಶನವನ್ನು ನೀಡಿ, ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಮೂಲಕ ಮುಸ್ಲಿಂ ಜನಾಂಗದವರಿಗೆ ಅನುಕೂಲವಾಗುವಂತೆ ಸುಸಜ್ಜಿತವಾದ ಒಂದು ಶಾದಿಮಹಲ್ ನಿರ್ಮಾಣ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯೆ ಶಿವಮ್ಮ, ಎಸ್‍ಟಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಾಳ್ಯಕೃಷ್ಣ, ಮುಸ್ಲಿಂ ಯಜಮಾನ ಅಬ್ದುಲ್ ರೆಹಮಾನ್ ಕಾಂಗ್ರೆಸ್ ಮುಖಂಡರಾದ ಲೊಕ್ಕನಹಳ್ಳಿ ರವಿ, ಸೈಯದ್ ಸಮೀಉಲ್ಲಾ, ಅಕ್ರಂಖಾನ್, ಮುನಾವರ್ ಪಾಷ, ರೆಹಮಾಣ್‍ಖಾಣ್, ಉಮರ್‍ಖಾನ್, ಸದ್ದಂಖಾನ್ ಹಾಗೂ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News