ಬೆಂಗಳೂರು: ಫೆ.3 ರಂದು ಸಂಗೀತೋತ್ಸವ

Update: 2018-02-01 18:15 GMT

ಬೆಂಗಳೂರು, ಫೆ.1: ಹಿತೈಷಿ ಮಹಿಳಾ ಮನೆಯಂಗಳ ಟ್ರಸ್ಟ್‌ನ 25ನೆ ಸಂವತ್ಸರದ ಅಂಗವಾಗಿ ಫೆ.3 ರಂದು ‘ನಾದ ನಿನಾದ’ ಸಂಗೀತ ಕಾರ್ಯಕ್ರಮವನ್ನು ನಾಗವಾರದ ಮಾನ್‌ಪೋ ಕನ್ವೆನ್‌ಷನ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷೆ ಬಿ.ಎಸ್. ಶ್ರೀರಂಗಮಣಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಯಂಗಳ ವೃದ್ಧಾಶ್ರಮವು ಹಲವು ವೃದ್ಧರಿಗೆ ತಾಣವಾಗಿದ್ದು, ಹಲವಾರು ವರ್ಷಗಳಿಂದ ತನ್ನ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ಮನೆಯಂಗಳದಲ್ಲಿ ಅವರಿಗೆ ಬೇಕಾದಂತಹ ಆಹಾರ ಸೌಲಭ್ಯ, ನರ್ಸ್‌ಗಳ ಸೇವೆ, ಹಾಗೂ ಅವರ ಮನರಂಜನೆಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇದನ್ನು ಇನ್ನೂ ಹೆಚ್ಚು ದಿನ ಮುಂದುವರಿಸುವ ಸಲುವಾಗಿ ಹಣ ಸಂಗ್ರಹಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅರುಣ್ ಹಾಗೂ ಅನುರಾಧ ಭಟ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದು, ಕನ್ನಡ ಹಾಗೂ ಹಿಂದಿ ಗಾಯನದ ಮೂಲಕ ಎಲ್ಲರನ್ನು ರಂಜಿಸಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News