ಓ ಮೆಣಸೇ..

Update: 2018-02-05 05:13 GMT

ಒಬ್ಬ ಪುತ್ರಿ ಹತ್ತು ಪುತ್ರರಿಗೆ ಸಮ - ನರೇಂದ್ರ ಮೋದಿ, ಪ್ರಧಾನಿ

ಅದಕ್ಕೆಂದೇ ಪುತ್ರಿಯರ ಸಂಖ್ಯೆಯನ್ನು ಇಳಿಸಲು ಹೊರಟಿದ್ದೀರಾ?

---------------------
 ಕ್ರೈಮ್‌ಗಳಲ್ಲೂ ಜಾತಿ ಹುಡುಕುವ ಕೆಲಸ ಸಿದ್ದರಾಮಯ್ಯ ಸರಕಾರ ಮಾಡುತ್ತಿದೆ - ಸಿ.ಟಿ.ರವಿ, ಶಾಸಕ

 ಹೆಣಗಳಲ್ಲಿ ಧರ್ಮ ಹುಡುಕುವುದಷ್ಟೇ ಸರಿ ಅಂತೀರಾ?

---------------------

ಜೆಡಿಎಸ್‌ಗೆ ಅಧಿಕಾರ ನೀಡಿದರೆ ರಾಮರಾಜ್ಯ ನಿರ್ಮಿಸುತ್ತೇವೆ - ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

ನಾಡಿನ ಜನರು ಬೆಂಕಿಗೆ ಹಾರಲು ಸಿದ್ಧರಾಗಬೇಕಾಗುತ್ತದೆ.

---------------------

ಜನಾರ್ದನ ಪೂಜಾರಿ ಆತ್ಮಕತೆ ಪಾಪದ ಕೊಡ - ಮಧು ಬಂಗಾರಪ್ಪ, ಶಾಸಕ

ಬಂಗಾರಪ್ಪರು ತುಂಬಿಸಿ ಕೊಟ್ಟ ಪಾಪದ ಕೊಡ ಅದು.

---------------------
ಪದ್ಮ ಪ್ರಶಸ್ತಿಗೆ ಶಿಫಾರಸು ಬೇಕಿಲ್ಲ - ನರೇಂದ್ರ ಮೋದಿ, ಪ್ರಧಾನಿ

ಮೋದಿ ಭಜನೆಯ ಅಗತ್ಯವಂತೂ ಇದೆ.

---------------------

ದೇವೇಗೌಡರು ನಮ್ಮ ಮನೆ ದೇವರು, ಅವರು ಆಡಿಸಿದಂತೆ ಆಡುತ್ತೇನೆ -ಶಿವರಾಮೇಗೌಡ, ಮಾಜಿ ಶಾಸಕ

ಇದನ್ನೂ ನಿಮ್ಮ ಬಾಯಲ್ಲಿ ಆ ಮನೆ ದೇವರೇ ಆಡಿಸಿರಬೇಕು.

---------------------
ಕಾವೇರಿ ತೀರ್ಪು ನೆನೆದು ನಿದ್ದೆ ಬರುತ್ತಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಬಹುಶಃ ಕಾವೇರಿಯ ಜೊತೆ ಜೊತೆಗೆ ಜನರು ನೀಡಲಿರುವ ತೀರ್ಪು ಕೂಡ ಕಾಡುತ್ತಿರಬೇಕು.

---------------------

ಲೋಕಸಭೆಯ ಶ್ರೀಮಂತ ಸಂಸದರು ಇನ್ನುಳಿದ ಅವಧಿಗೆ ವೇತನ ತ್ಯಜಿಸಲಿ - ವರುಣ್‌ಗಾಂಧಿ, ಸಂಸದ

ಬಿಜೆಪಿ ತ್ಯಜಿಸುತ್ತಿರುವ ಸೂಚನೆ.

---------------------

ಶವ ಮತ್ತು ಸಾವಿನಲ್ಲಿ ಯಾರೂ ರಾಜಕೀಯ ಮಾಡಬಾರದು - ಯು.ಟಿ.ಖಾದರ್, ಸಚಿವ

ಉಳಿದ ವಿಷಯಗಳಲ್ಲಿ ರಾಜಕೀಯ ಮಾಡುವುದಕ್ಕೆ ತಮ್ಮ ಸಮ್ಮತಿಯಿದೆಯೇ?

---------------------

ಕಂಬಳವು ಕೋಣವನ್ನು ಓಡಿಸುವ ಕ್ರೀಡೆಯಾಗಿದ್ದು ಇದರಲ್ಲಿ ಹಿಂಸೆ ಇಲ್ಲ - ಬಿ.ವಿ.ಆಚಾರ್ಯ, ರಾಜ್ಯದ ಮುಖ್ಯ ಅಡ್ವಕೇಟ್ ಜನರಲ್

ಒಮ್ಮೆ ನಿಮ್ಮನ್ನು ಓಡಿಸಿದಾಗ ಗೊತ್ತಾಗಬಹುದು, ಹಿಂಸೆಯೋ ಅಹಿಂಸೆಯೋ ಎನ್ನುವುದು.

---------------------

ಕರ್ನಾಟಕದ ಮುಸ್ಲಿಮರು ಬುದ್ಧಿವಂತರು - ಝಮೀರ್ ಅಹ್ಮದ್, ಶಾಸಕ

ಪದೇ ಪದೇ ನೀವು ಶಾಸಕರಾಗುತ್ತಿರುವುದು ನೋಡಿದಾಗ ಹಾಗನ್ನಿಸುತ್ತಿಲ್ಲ.

---------------------
ವಿಶ್ವಕಲ್ಯಾಣ ನಮ್ಮ ಗುರಿ - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ

ನಾಗ್ಪುರ ನೀವು ಹೇಳುತ್ತಿರುವ ವಿಶ್ವ ಇರಬೇಕು.

---------------------
ರಾಜಕೀಯ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ - ಪ್ರಮೋದ್ ಮಧ್ವರಾಜ್, ಸಚಿವ

ಅನುಭವದ ಮಾತು.

---------------------

ಮಾತೃಭಾಷಾ ಶಿಕ್ಷಣದಿಂದ ಮಾತ್ರ ಉತ್ತಮ ಸಂಸ್ಕಾರ ಲಭಿಸಲು ಸಾಧ್ಯ - ನಳಿನ್‌ಕುಮಾರ್ ಕಟೀಲು, ಸಂಸದ

ನಿಮಗೆ ಮಾತೃಭಾಷಾ ಶಿಕ್ಷಣ ದಕ್ಕದೇ ಇರುವ ಬಗ್ಗೆ ಮಂಗಳೂರು ಪರಿತಪಿಸುತ್ತಿದೆ.

---------------------

ಬಿಜೆಪಿಯಲ್ಲಿರುವವರೆಲ್ಲರೂ ಭಯದಲ್ಲಿದ್ದಾರೆ - ಯಶವಂತ ಸಿನ್ಹಾ, ಬಿಜೆಪಿ ನಾಯಕ

ಇದೇ ಮೊದಲ ಬಾರಿಗೆ ಭಯೋತ್ಪಾದನೆಯ ಅನುಭವ ಅವರಿಗಾಗಿದೆ.

---------------------

ಬೇರೆ ಪಕ್ಷಕ್ಕಿಂತ ನಮ್ಮ ಪಕ್ಷದವರೇ ನಮ್ಮನ್ನು ಸೋಲಿಸುವ ಸಂಚು ಮಾಡುತ್ತಾರೆ - ಡಿ.ಕೆ.ಶಿವಕುಮಾರ್, ಸಚಿವ

ಸಂಚು ಮಾಡಿ ಪಳಗಿದವರಿಂದ ಈ ಮಾತೇ?
---------------------

ಬಿಜೆಪಿಗೆ ಎಸ್.ಎಂ.ಕೃಷ್ಣ ಬೇಕು, ನಾನು ಬೇಡ - ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಅಧ್ಯಕ್ಷ

ನೀವು ಬಿಜೆಪಿಗೆ ಮಾತ್ರವಲ್ಲ, ಇಡೀ ದೇಶಕ್ಕೇ ಬೇಡವಾಗಿದ್ದೀರಿ.

---------------------
ಪ್ರಧಾನಿ ನರೇಂದ್ರ ಮೋದಿ ಒಬ್ಬ ಮೌನಿ ಬಾಬಾ - ವಿ.ಎಸ್.ಉಗ್ರಪ್ಪ, ವಿ.ಪ.ಸದಸ್ಯ

ಆ ಮೌನಕ್ಕೆ ದೇಶ ಭಾರೀ ಬೆಲೆ ತೆತ್ತಿದೆ.

---------------------

ನಾನು ಮದುವೆಯಾಗಿದ್ದಿದ್ದರೆ ನನಗೆ ಚಿಕ್ಕ ಪರಿವಾರ ಇರುತ್ತಿತ್ತು -ಅಣ್ಣಾ ಹಝಾರೆ, ಸಾಮಾಜಿಕ ಹೋರಾಟಗಾರ

ಅರವಿಂದ ಕೇಜ್ರಿವಾಲ್ ಬದಲು ಪರಿವಾರದವರನ್ನೇ ಮುಖ್ಯಮಂತ್ರಿ ಮಾಡಬಹುದಿತ್ತು .

---------------------
ನನಗೊಂದು ಗಾಯವಾಗಿತ್ತು, ಅದೀಗ ಗುಣವಾಗಿದೆ - ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಶಾಸಕ

ಹೊಸ ಗಾಯಕ್ಕಾಗಿ ಮತ್ತೆ ಹಂಬಲಿಕೆಯೆ?

---------------------

ದೇವೇಗೌಡರ ನಾಮ ಬಲವೇ ಜೆಡಿಎಸ್‌ಗೆ ಶ್ರೀರಕ್ಷೆ - ಶಿವರಾಮೇಗೌಡ, ಮಾಜಿ ಶಾಸಕ

ಅದು ಬರೇ ನಾಮವಲ್ಲ, ಜನರ ಪಾಲಿನ ಪಂಗನಾಮ.

---------------------
ಹೈಕಮಾಂಡ್ ಬಯಸಿದರೆ ಮುಖ್ಯಮಂತ್ರಿಯಾಗಲು ಸಿದ್ಧ - ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ದಲಿತರಿಗಂತೂ ನಿಮ್ಮ ಕುರಿತು ಆ ಬಯಕೆ ಇಲ್ಲ.

---------------------

ಕಾಸಗಂಜ್ ಗಲಭೆ ಕ್ಷುಲ್ಲಕ ವಿಷಯ - ಉತ್ತರ ಪ್ರದೇಶದ ಸಚಿವ

ಹಾಗಾದರೆ ಗಂಭೀರವಾಗಿ ಇನ್ನೊಂದು ಗಲಭೆಗೆ ಯೋಜನೆ ಹಾಕಿಕೊಂಡಿದ್ದೀರಾ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...