ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ ಬೆದರಿಕೆ: ಫೈನಾನ್ಸಿಯರ್ ಆತ್ಮಹತ್ಯೆ

Update: 2018-02-05 15:54 GMT

ಮೈಸೂರು,ಫೆ.5: ಸಾಲ ವಾಪಸ್ ಕೇಳಿದ್ದಕ್ಕೆ ರಾಜಕಾರಣಿ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಫೈನಾನ್ಸಿಯರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ವಿಜಯನಗದಲ್ಲಿ ನಡೆದಿದೆ.

ಆನಂದರೂರು ನಿವಾಸಿ ಫೈನಾನ್ಸಿಯರ್ ಎ.ಸಿ. ಯತಿರಾಜ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಅವರು ಚೆಲುವನಾರಾಯಣಸ್ವಾಮಿ ಚಿಟ್ ಫಂಡ್ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ತಾಲೂಕು ಎಪಿಎಂಸಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಸೇರಿದಂತೆ ಹಲವಾರು ರಾಜಕಾರಣಿಗಳಿಗೆ 5 ಕೋಟಿಯಷ್ಟು ಹಣ ನೀಡಿದ್ದರು ಎನ್ನಲಾಗಿದೆ.

ಮಾವಿನಹಳ್ಳಿ ಸಿದ್ದೇಗೌಡನಿಗೆ ಸುಮಾರು 1 ಕೋಟಿ 70 ಲಕ್ಷ ರೂ. ಸಾಲ ನೀಡಿದ್ದರೆನ್ನಲಾದ ಯತಿರಾಜ್, ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಫೈನಾನ್ಸಿಯರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಯತಿರಾಜ್ ಸಂಬಂಧಿ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News