ಚಾಮರಾಜನಗರ: ನಾಲೆಗೆ ಬಿದ್ದು ಪ್ರಾಣ ಕಳೆದುಕೊಂಡ ಜಿಂಕೆ

Update: 2018-02-06 17:40 GMT

ಚಾಮರಾಜನಗರ,ಫೆ.06: ನಾಯಿಗಳ ದಾಳಿಗೆ ಬೆದರಿದ ಜಿಂಕೆಯೊಂದು ನಾಲೆಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಸಂತೇಮರಹಳ್ಳಿಯಲ್ಲಿ ನಡೆದಿದೆ.

ತಾಲೂಕಿನ ಸಂತೇಮರಹಳ್ಳಿ ಬಳಿ ಇರುವ ನಾಲೆಯ ಬಳಿ ಕಾಡಿನಿಂದ ನಾಡಿಗೆ ಆಹಾರ ಹುಡುಕಿಕೊಂಡ ಬಂದ ಮೂರು ಜಿಂಕೆಗಳನ್ನು ಕಂಡ ಬೀದಿ ನಾಯಿಗಳು, ಜಿಂಕೆಯನ್ನು ಭೇಟೆಯಾಡಲು ಮುಂದಾಗಿದೆ. ಇದರಿಂದಾಗಿ ಬೆದರಿದ ಜಿಂಕೆಗಳು ದಿಕ್ಕಾಪಾಲಾಗಿ ಓಡಿದ್ದು, ಮೂರು ಜಿಂಕೆಗಳಲ್ಲಿ ಎರಡು ಜಿಂಕೆಗಳು ತಪ್ಪಿಸಿಕೊಂಡರೆ ಮತ್ತೊಂದು ಜಿಂಕೆ ಪಕ್ಕದಲ್ಲೇ ಇದ್ದ 50 ಅಡಿ ನಾಲೆಗೆ ಬಿದ್ದು ಮೃತಪಟ್ಟಿದೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜಿಂಕೆಯ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಅಂತ್ಯ ಸಂಸ್ಕಾರ ನಡೆಸಿದರು.
ಸ್ನೇಕ್ ಮಹೇಶ್, ಶಿಕ್ಷಕ ಪ್ರಸಾದ್, ಆರ್.ಎಫ್.ಓ ರಚನಾಕುಮಾರ್, ಗಾರ್ಡ್ ಮಹದೇವು ಸ್ಥಳದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News