ಮಂಡ್ಯ: ಹಸುಳೆಗಳ ಸಾವು ಪ್ರಕರಣ; ತಪ್ಪಿತಸ್ಥ ವೈದ್ಯಾಧಿಕಾರಿಗಳ ಅಮಾನತಿಗೆ ಒತ್ತಾಯ
Update: 2018-02-12 18:07 GMT
ಮಂಡ್ಯ, ಫೆ.12: ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲೂಕಿನ ಚಂದಗಿರಿದೊಡ್ಡಿಯ ಇಬ್ಬರು ಹಸುಳೆಗಳು ಸಾವಿಗೀಡಾಗಿದ್ದು, ಕೂಡಲೇ ಶಿಸ್ತುಕ್ರಮ ಜರುಗಿಸುವಂತೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಘಟನೆಗೆ ಕಾರಣರಾದ ತಪ್ಪಿತಸ್ಥರನ್ನು ಅಮಾನತುಪಡಿಸಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಹಾಗೂ ಸಾವಿಗೀಡಾದ ಮಕ್ಕಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮಕ್ಕಳಿಗೆ ಬಾಲ್ಯದಲ್ಲಿ ನಿಯಮಿತವಾಗಿ ಲಸಿಕೆ ಅಥವಾ ಚುಚ್ಚುಮದ್ದು ಕೊಡುವ ಮೂಲಕ ಸೋಂಕುಕಾರಕ ಕಾಯಿಲೆಗಳ ಗಂಭೀರ ತೊಡಕುಗಳು, ಅಂಗವೈಕಲ್ಯಗಳು ಮತ್ತು ಮರಣಗಳಿಂದ ರಕ್ಷಣೆಯನ್ನು ತಡೆಯಲು ಭಾರತ ಸರಕಾರ ರೋಗ ಪ್ರತಿಬಂಧಿತ ಲಸಿಕಾ ಕಾರ್ಯಕ್ರಗಳನ್ನು ಜಾರಿಗೆ ತಂದಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದ್ದಾರೆ.