ಪೊಕ್ರಾನ್ ನಲ್ಲಿ ಸ್ಫೋಟ: ಕರ್ನಾಟಕದ ಯೋಧ ಜಾವಿದ್ ಹುತಾತ್ಮ

Update: 2018-02-13 15:19 GMT

ಹರಿಹರ, ಫೆ.13: ಕಾರ್ಯಾಚರಣೆಯ ಸಂದರ್ಭ ಮದ್ದುಗುಂಡುಗಳು ಸ್ಪೋಟಗೊಂಡ ಪರಿಣಾಮ ಕರ್ನಾಟಕದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ರಾಜಸ್ಥಾನದ ಪೊಕ್ರಾನ್ ನಲ್ಲಿ ಘಟನೆ ನಡೆದಿದೆ.

ಹರಿಹರ ಪಟ್ಟಣದ ಪಿ.ಬಿ.ರಸ್ತೆ ನಿವಾಸಿ ಜಾವಿದ್( 32) ಹುತಾತ್ಮ ಯೋಧ. ಇವರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ರಾಕೆಟ್ ಲಾಂಚರ್ ಗಳಿಂದ ಸಿಡಿಸಲಾಗಿದ್ದ ಮದ್ದುಗುಂಡುಗಳನ್ನು ಸಿಡಿದಿರಲಿಲ್ಲ. ಈ ಮದ್ದುಗುಂಡುಗಳನ್ನು ನಾಶ ಮಾಡುವ ಸಂದರ್ಭ ಅವುಗಳು ಸಿಡಿದಿವೆ.

ಘಟನೆಯಲ್ಲಿ ಜಾವಿದ್ ಮೃತಪಟ್ಟರೆ ಮತ್ತೊಬ್ಬರು ಗಾಯಗೊಂಡಿದ್ದಾರೆ. ಮದ್ದುಗುಂಡುಗಳು ದೋಷಪೂರಿತವಾಗಿದ್ದೇ ಕಾರಣ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News