ಗುಂಡ್ಲುಪೇಟೆ: ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಮುರುಗಪ್ಪ ಸ್ಮಾರಕಕ್ಕೆ ಶ್ರದ್ದಾಂಜಲಿ

Update: 2018-02-18 17:55 GMT

ಗುಂಡ್ಲುಪೇಟೆ,ಫೆ.18: ಕಳೆದ ವರ್ಷ ಅರಣ್ಯಕ್ಕೆ ಬಿದ್ದ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಸಜೀವ ದಹನವಾದ ಹುತಾತ್ಮ ಮುರುಗೆಪ್ಪ ತಮ್ಮಣಗೋಳ್ ಅವರ ಸ್ಮಾರಕಕ್ಕೆ ಅರಣ್ಯಾಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಪೂಜೆ ಸಲ್ಲಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು.

ಬಂಡೀಪುರ ಹುಲಿಯೋಜನೆಯ ಕಲ್ಕೆರೆ ವಲಯದಲ್ಲಿ ಕಳೆದ ವರ್ಷ ಫೆ 16ರಂದು ಬೆಂಕಿನಂದಿಸುವ ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿ ಮುರುಗೆಪ್ಪ ತಮ್ಮಣಗೋಳ್ ಬೆಂಕಿಗೆ ಸಿಲುಕಿದ್ದ ಒಬ್ಬರು ಅಧಿಕಾರಿ ಹಾಗೂ ಇಬ್ಬರು ಸಿಬ್ಬಂದಿಯನ್ನು ಕಾಪಾಡಿ ಹೊಗೆಯಿಂದ ಉಸಿರುಗಟ್ಟಿ ತಾವೇ ಬೆಂಕಿಗೆ ಸಿಲುಕಿ ಸ್ಥಳದಲ್ಲಿಯೇ ಸಜೀವ ದಹನವಾಗಿದ್ದರು. ಕರ್ತವ್ಯಕ್ಕಾಗಿ ಪ್ರಾಣವನ್ನು ಲೆಕ್ಕಿಸದೆ ಹುತಾತ್ಮರಾದ ಸಿಬ್ಬಂದಿಯ ನೆನಪಿಗೆ ಸ್ಥಳದಲ್ಲಿ ಸಮಾಧಿ ನಿರ್ಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಭಾನುವಾರ ಸಮಾಧಿಗೆ ಪೂಜೆ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಹೆಡೆಯಾಲ ಉಪವಿಭಾಗದ ಎಸಿಎಫ್ ಕೆ.ಪರಮೇಶ್, ಕಲ್ಕೆರೆ ಆರ್‍ಎಫ್‍ಓ ಪುಟ್ಟರಾಜು, ಸಹೋದ್ಯೋಗಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News