ಕೊಳ್ಳೇಗಾಲ: ದೇವಸ್ಥಾನದ ಕಾಣಿಕೆ ಹುಂಡಿಯ ಹಣ ದೋಚಿದ ಕಳ್ಳರು

Update: 2018-02-19 12:48 GMT

ಕೊಳ್ಳೇಗಾಲ,ಫೆ.19: ಪಟ್ಟಣ ವ್ಯಾಪ್ತಿಯ ಹಂಪಾಪುರ ಗ್ರಾಮದ ರಸ್ತೆಯಲ್ಲಿರುವ ಶಿವರಾಳೇಶ್ವರ ದೇವಸ್ಥಾನ ಹಾಗೂ ಶನೇಶ್ವರ ದೇವಾಲಯದಲ್ಲಿ ಬೀಗ ಹೊಡೆದು ಅಲ್ಲಿದ್ದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ.

ಸೋಮವಾರ ಬೆಳಗ್ಗೆ 6 ಗಂಟೆಗೆ ಅರ್ಚಕರು ದೇವಸ್ಥಾನ ಬಾಗಿಲನ್ನು ತೆರೆಯಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. 

ಘಟನಾ ಸ್ಥಳಕ್ಕೆ ಪಟ್ಟಣ ಠಾಣೆಯ ಪಿ.ಎಸ್.ಐ ವೀಣಾ ನಾಯಕ್, ಪೂಜಾರಿ, ಕಾಮರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಈ ಸಂಬಂದ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News