ಹನೂರು: ರೈತ ನಾಯಕ ಪುಟ್ಟಣ್ಣಯ್ಯ ಭಾವ ಚಿತ್ರಕ್ಕೆ ಪುಷ್ಪ ನಮನ

Update: 2018-02-19 16:45 GMT

ಹನೂರು,ಫೆ.19: ರೈತ ನಾಯಕ, ಶಾಸಕ  ಕೆ.ಎಸ್ ಪುಟ್ಟಣ್ಣಯ್ಯ ಅವರ ನಿಧನಕ್ಕೆ ಹನೂರಿನ ಕನ್ನಡ ಪರ ಸಂಘಟನೆಗಳು, ಸಾರ್ವಜನಿಕರು, ಮುಖಂಡರು ಮತ್ತು ವ್ಯಾಪಾರಿಗಳು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂತಾಪ ಸೂಚಿಸಿದರು 

ಹನೂರು ಕರವೇ ಅಧ್ಯಕ್ಷ ವಿನೋದ್ ಮಾತನಾಡಿ, ಸದನದ ಒಳಗೆ ಮತ್ತು ಹೊರಗೆ ರೈತರ ಪರವಾದ ಗಟ್ಟಿ ದ್ವನಿಯಾಗಿದ್ದ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಅವರು ಸಾವು ಅನಿರೀಕ್ಷಿತವಾದದ್ದು, ಜೀವನವೀಡಿ ಹೋರಾಟದಲ್ಲಿ ಮುಂದುವರೆದ ಅವರು ನಿಸ್ವಾರ್ಥದಿಂದ ಸೇವೆ ಸಲ್ಲಿಸಿದರು. ರೈತರ ಕಷ್ಟಗಳಿಗೆ ಸ್ಪಂದಿಸುವ ಮಹಾನ್ ಚೇತನರಾಗಿದ್ದರು, ಸದಾ ರೈತಪರ ಹೋರಾಟದ ನಾಯಕತ್ವ ವಹಿಸಿ ಸಮಸ್ಯೆಗಳಿಗೆ ಬಗೆಹರಿಸುವುದಕ್ಕೆ ಮುಂದಾಗುತ್ತಿದ್ದರು. ಇವರ ಸಾವು ರೈತರಿಗೆ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಟ ಎಂದರು 

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮಾಜಿ ಅದ್ಯಕ್ಷರುಗಳಾದ ರಾಜೂಗೌಡ, ಬಾಲರಾಜನಾಯ್ಡು, ಮುಖಂಡರಾದ ವೆಂಕಟೇಗೌಡ, ಕೃಷ್ಣ , ನಟರಾಜು  ಸುದೇಶ್,ಕರವೇ ಪದಾಧಿಕಾರಿ ಗಿರೀಶ್, ಒಕ್ಕಲಿಗ ಯುವ ಸಮಿತಿ ಸದಸ್ಯ ವಿಜಯ್ ಹಾಗೂ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News