ಶೈಕ್ಷಣಿಕವಾಗಿ ಬಲಿಜ ಸಮುದಾಯ ಸದೃಢವಾಗಬೇಕಿದೆ: ಸಚಿವ ಸೀತಾರಾಂ

Update: 2018-02-19 17:07 GMT

ಮಡಿಕೇರಿ,ಫೆ.19: ಕೊಡಗು ಜಿಲ್ಲೆಯಲ್ಲಿ ಶತಶತಮಾನಗಳಿಂದಲೂ ನೆಲೆ ನಿಂತಿರುವ ಬಲಿಜ ಸಮುದಾಯ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸದೃಢರಾಗಬೇಕಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಬಲಿಜ ಮುಖಂಡರೂ ಆಗಿರುವ ಎಂ.ಆರ್.ಸೀತಾರಾಮ್ ಅಭಿಪ್ರಾಯಪಟ್ಟರು.

ವೀರಾಜಪೇಟೆ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಕೊಡಗು ಜಿಲ್ಲಾ ಬಲಿಜ ಸಮಾಜ ಹಾಗೂ ಮೂರು ತಾಲೂಕು ಬಲಿಜ ಸಮಾಜ ನಿರ್ದೇಶಕರ ಸಭೆಯಲ್ಲಿ ಬಲಿಜ ಸಮುದಾಯದಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬಲಿಜ ಜನಾಂಗದ ಏಳಿಗೆಗಾಗಿ, ಶೈಕ್ಷಣಿಕ ಪ್ರಗತಿಗಾಗಿ ಎಂ.ಎಸ್.ರಾಮಯ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವರ್ಷಂಪ್ರತಿ ವೈದ್ಯಕೀಯ, ಇಂಜಿನಿಯರಿಂಗ್, ವಿವಿಧ ಪದವಿ ವ್ಯಾಸಂಗಕ್ಕಾಗಿ ಹಾಗೂ ‘ಮೆರಿಟ್’ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು, ಕೊಡಗಿನ ಬಹುತೇಕ ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತರಾಗುತ್ತಿರುವ ಕುರಿತು ವಿಷಾದಿಸಿದರು.

ಕೊಡಗಿನ ಮೂರು ತಾಲ್ಲೂಕು ಹಾಗೂ ಜಿಲ್ಲಾ ಬಲಿಜ ಸಮಾಜದ ಸಮುದಾಯ ಭವನ ಹಾಗೂ ಅಭ್ಯುದಯ ಕಾರ್ಯಗಳಿಗೆ ಸರ್ಕಾರಿ ನಿವೇಶನ ದೊರಕಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವದಾಗಿಯೂ, ರಾಜ್ಯ ಸರ್ಕಾರದ ಯೋಜನೆಗಳನ್ನು ಹೊಂದಿಕೊಂಡು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವಂತೆ ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್, ಕೊಡಗು ಜಿಲ್ಲೆಯಲ್ಲಿ ಸಮಾಜವು ರಾಜಕೀಯ ರಹಿತವಾಗಿ ಸಂಘಟಿತರಾಗುತ್ತಿದ್ದು, ಮೇ.19,20 ರಂದು ಹಾತೂರುವಿನಲ್ಲಿ ಕೊಡಗು ಬಲಿಜ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿ, ಇತರೆ ಕೌಟುಂಬಿಕ ಕ್ರೀಡಾ ಹಬ್ಬಗಳಿಗೆ ಅನುದಾನ ನೀಡುತ್ತಿರುವಂತೆ ಬಲಿಜ ಕ್ರೀಡಾ ಹಬ್ಬಕ್ಕೂ ಅನುದಾನ ಕಲ್ಪಿಸಲು ಮನವಿ ಮಾಡಿದರು.

ವೀರಾಜಪೇಟೆ ತಾಲೂಕು ಬಲಿಜ ಸಮಾಜದ ಅಧ್ಯಕ್ಷ ಎಸ್.ಕೆ.ಗಣೇಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಟಿ.ಡಿ.ದಯಾನಂದ್ ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷೆ ಮೀನಾಕ್ಷಿ ಕೇಶವ್ ರವರು ಕನಿಷ್ಟ ಅರ್ಧ ಎಕರೆ ನಿವೇಶನವನ್ನು ಬಲಿಜ ಸಮುದಾಯದ ಅಭ್ಯುದಯಕ್ಕೆ ಮಂಜೂರು ಮಾಡಿಸಬೇಕೆಂದು ಮನವಿ ಮಾಡಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ 40 ವರ್ಷಗಳಿಂದ ಬಲಿಜ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿರುವ ಸಿದ್ಧಾಪುರ ಸಮೀಪ ಗುಹ್ಯ ಪದ್ಮಾ ಎಸ್ಟೇಟ್ ಮಾಲೀಕರಾದ ವಿಜಯಲಕ್ಷ್ಮಿ ಸಂಪತ್‍ಕುಮಾರ್ ಅವರನ್ನು ಇದೇ ಸಂದರ್ಭ ಸಚಿವರು ಸನ್ಮಾನಿಸಿದರು.

ವೇದಿಕೆಯಲ್ಲಿ ಬಲಿಜ ಸಮಾಜ ಕಾನೂನು ಸಲಹೆಗಾರ ಸಂಜಯ್ ರಾಜ್, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಸಚಿವರ ಆಪ್ತರಾದ ಹರೀಶ್‍ಬೋಪಣ್ಣ, ಕಾಂಗ್ರೆಸ್ ಪ್ರಮುಖರಾದ ಮಿಟ್ಟು ಚಂಗಪ್ಪ, ಇಬ್ರಾಯಿಂ ಮಾಸ್ಟರ್, ಸೋಮವಾರಪೇಟೆ ತಾಲೂಕು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಚಂದ್ರಮೌಳಿ ಹಾಗೂ ಬಲಿಜ ಪ್ರಮುಖರಾದ ಕುಶಾಲನಗರದ ಸತೀಶ್ ನಾಯ್ಡು, ವೀರಾಜಪೇಟೆ ಗೋವಿಂದರಾಜು ನಾಯ್ಡು, ಶ್ರೀನಿವಾಸ್ ನಾಪೊಕ್ಲು, ಕೊಡಗು ಜಿಲ್ಲಾ ಬಲಿಜ ಸಮಾಜ ಪ್ರಧಾನ ಕಾರ್ಯದರ್ಶಿ ಟಿ.ಸಿ.ಗೀತಾನಾಯ್ಡು, ವೀರಾಜಪೇಟೆ ಬಲಿಜ ಸಮಾಜ ಪ್ರಧಾನ ಕಾರ್ಯದರ್ಶಿ ಟಿ.ಆರ್.ಗಣೇಶ್, ಪ್ರಮುಖರಾದ ಟಿ.ಎಸ್.ಬಾಲಕೃಷ್ಣ, ಟಿ.ವಿ.ಲೋಕೇಶ್, ಪೆರುಂಬಾಡಿ ದೇವಯ್ಯ, ಗೀತಾ ಶನಿವಾರಸಂತೆ, ಸಿ.ವಿ.ಜಯಪ್ಪ, ಯತಿರಾಜ್ ನಾಯ್ಡು, ನಾಪೊಕ್ಲು ಆನಂದಸ್ವಾಮಿ, ಬೆಕ್ಕೆಸೊಡ್ಲೂರು ಪಾಪಯ್ಯ ನಾಯ್ಡು, ಭವಾನಿ, ಶ್ಯಾಮಲಾ, ಸುಮಾ, ಸತ್ಯನಾರಾಯಣ್, ಲಲಿತಾ, ಹರೀಶ್, ಗಣೇಶ್ ಶೆಟ್ಟಿ, ಧರ್ಮಪ್ರಕಾಶ್, ಭರತ್, ಮದನ್, ಪದ್ಮಾ, ದೇವರಾಜ್, ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News