ಕೊಳ್ಳೇಗಾಲ: ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಉದ್ಘಾಟನೆ

Update: 2018-02-19 17:20 GMT

ಕೊಳ್ಳೇಗಾಲ,ಫೆ.19: ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ವತಿಯಿಂದ ಜಾರಿಗೆ ತಂದಿರುವ ಸಾರ್ವಜನಿಕರ ಆಸ್ವತ್ರೆಯಲ್ಲಿ ಎಲ್ಲಾ ತರಹ ಔಷಧಿಗಳು ದೊರೆಯುತ್ತದೆ. ಇದನ್ನು ಸದ್ದುಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಸ್.ಜಯಣ್ಣ ಅವರು ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ವತ್ರೆ ಹಿಂಬಾಗದಲ್ಲಿ ಏರ್ಪಡಿಸಿದ್ದ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಾರ್ವಜನಿಕ ಆಸ್ವತ್ರೆಯಲ್ಲಿ ಎಲ್ಲಾ ತರಹದ ಔಷಧಿಗಳು ಬಡವರಿಗೆ ಎಟುಕುವ ಬೆಲೆಗಳಲ್ಲಿ ಲಭ್ಯವಿದೆ. ಹಾಗಾಗಿ ಔಷಧಿಗಳು ಸಿಗಲಿಲ್ಲ ಅಥವ ಔಷಧಿ ಕೊರತೆಯಿಂದಾಗಿ ಬಡವರು ಪ್ರಾಣ ಕಳೆದುಕೊಳ್ಳುವಂತಾಗಬಾರದು ಎಂದು ಹೇಳಿದರು.

ಈ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರವು ಇಡೀ ದೇಶದಾದ್ಯಂತ ಜನ ಔಷಧಿ ಕೇಂದ್ರಗಳನ್ನು ಸ್ಧಾಪಿಸಿದೆ. ಇವುಗಳು ಭಾರತ ಸರ್ಕಾರ ತೆರೆದಿರುವ ಸರಣಿ ಔಷಧಿ ಅಂಗಡಿಗಳಾಗಿವೆ ಇಲ್ಲಿ ಪ್ರಧಾನ ಭಾರತೀಯ ಜನ ಔಷಧಿ ಪರಿಯೋಜನೆ (ಪಿಎಮ್‍ಬಿಜೆಪಿ) ಅಡಿಯಲ್ಲಿ ಶ್ರೇಷ್ಠ ಗುಣಮಟ್ಟದ ಔಷಧಿಗಳನ್ನು ಎಟುಕುವ ಬೆಲೆಗಳನ್ನು ಜನರಿಗೆ ಒದಗಿಸಿಲಾಗುತ್ತದೆ. ಇದನ್ನು ಸದ್ದಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಶಾಂತರಾಜು, ಉಪಾಧ್ಯಕ್ಷ ಶಿವಾನಂದ, ಹರ್ಷ,  ಜಿಲ್ಲಾ ಕೇಂದ್ರದ ಡಿ.ಹೆಚ್, ಡಾ.ಪ್ರಸಾದ್, ಡಾ.ರವೀಂದ್ರ, ಡಾ.ರಾಜು, ಗಿರೀಶ್ ಹಾಗೂ ಆಸ್ವತ್ರೆಯ ಸಿಬ್ಬಂದಿಗಳು ಹಾಜರಿದ್ದರು.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News