×
Ad

ಶ್ರವಣಬೆಳಗೊಳ: ಮಹಾಮಸ್ತಕಾಭಿಷೇಕದ ಅಂಗವಾಗಿ ಹೆಲಿಟೂರಿಸಂಗೆ ಚಾಲನೆ

Update: 2018-02-21 21:23 IST

ಶ್ರವಣಬೆಳಗೊಳ,ಫೆ.21: ಜನಸಾಮಾನ್ಯರು ಕೂಡ ಹೆಲಿಕಾಪ್ಟರ್ ನ ಅನುಭವ ಪಡೆದುಕೊಳ್ಳಲು ಇದು ಒಂದು ಒಳ್ಳೆಯ ಅವಕಾಶ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹೇಳಿದರು.

ಜೈನಕಾಶಿ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕದ ಅಂಗವಾಗಿ ಹೊಸ ಪರಿಕಲ್ಪನೆಯೊಂದಿಗೆ ಆಯೋಜಿಸಿರುವ ಹೆಲಿಟೂರಿಸಂಗೆ ಚಾಲನೆ ನೀಡಿ ಮಾತನಾಡಿ, ದೇಶದ ವಿವಿಧ ಭಾಗಗಳಿಂದ ಆಗಮಿಸುವ ಯಾತ್ರಿಕರು, ಪ್ರಯಾಣಿಕರು ಹಾಗು ಭಕ್ತಾದಿಗಳಿಗೆ ಈ ಬಾರಿಯ ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ನೆನಪಿನಲ್ಲಿಟ್ಟುಕೊಳ್ಳವಂತೆ ಮಾಡಲು ಹೆಲಿಟೂರಿಸಂ ಸಹಾಯಕವಾಗಲಿದೆ ಎಂದರು.

ವಯೋವೃದ್ದರು, ಅಂಗವಿಕಲರು ಹಾಗೂ ಬೆಟ್ಟವನ್ನು ಹತ್ತಿ ನೋಡಲು ಆಗದಿರುವವರಿಗೆ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ, ವಿಂಧ್ಯಗಿರಿ, ಚಂದ್ರಗಿರಿ ಹಾಗೂ ಸುತ್ತಲ ಪರಿಸರವನ್ನು ಹೆಲಿಕಾಪ್ಟರ್ ನಿಂದ ನೋಡುವುದು ಒಂದು ವಿಶಿಷ್ಠ ಅನುಭವವನ್ನು ನೀಡಲಿದ್ದು, ಯಾತ್ರಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸದ್ಯದಲ್ಲಿ ಒಂದು ಹೆಲಿಕಾಪ್ಟರ್ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಯಾತ್ರಾತ್ರಿಗಳಿಂದ ಬೇಡಿಕೆ ಹೆಚ್ಚಾದಲ್ಲಿ ಮುಂದಿನ ದಿನಗಳಲ್ಲಿ ಮತ್ತೆರಡು ಹೆಲಿಕ್ಯಾಪ್ಟರ್ ಗಳನ್ನು ನಿಯೋಜಿಸಲಾಗುವುದು, ಜತೆಗೆ ಈ ಹೆಲಿಟೂರಿಸಂ ಸೌಲಭ್ಯವು ಆಗಸ್ಟ್ ತಿಂಗಳ ಕೊನೆಯವರೆಗೂ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು.

ಹೆಲಿಟೋರಿಸಂನ ಪಟ್ಟಿ: ಒಂದು ಬಾರಿಗೆ 6 ಜನರು ಕುಳಿತು ಶ್ರವಣಬೆಳಗೊಳ ಸುತ್ತಲ ಪರಿಸರವನ್ನು ವೀಕ್ಷಿಸಬಹುದಾಗಿದ್ದು, ಪ್ರತಿಯೊಬ್ಬರಿಗೆ 2100 ರೂನಂತೆ 8 ನಿಮಿಷಗಳ ಕಾಲ ಹಾರಾಟದ ವ್ಯವಸ್ಥೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News