ಈ ವರ್ಷ 9 ದಲಿತರ ಹತ್ಯೆ: ರಾಮಲಿಂಗಾರೆಡ್ಡಿ

Update: 2018-02-22 15:00 GMT

ಬೆಂಗಳೂರು, ಫೆ.22: ಕರ್ನಾಟಕ ರಾಜ್ಯದ ಪ್ರಸ್ತುತ ವರ್ಷದಲ್ಲಿ 9 ಜನ ದಲಿತರ ಕೊಲೆಗಳಾಗಿವೆ. 14 ಅತ್ಯಾಚಾರಗಳು ಹಾಗೂ 137 ಇತರೆ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಗುರುವಾರ ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮತ್ತು ಬಿಜೆಪಿ ಸದಸ್ಯ ಡಿ.ಎಸ್.ವೀರಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಬ್ಬ ಅಧಿಕಾರಿಯು ಎರಡು ವರ್ಷಗಳ ಕಾಲ ಬೇರೆ ಕಡೆಗೆ ವರ್ಗಾವಣೆಯಾಗದೆ ಒಂದೆ ಕಡೆಗೆ ಇರಬೇಕು. ಅಂದಾಗ ಮಾತ್ರ ದಲಿತರ ಮೇಲಿನ ಪ್ರಕರಣಗಳು ಸೇರಿ ಇತರೆ ವರ್ಗದವರ ಮೇಲೆ ನಡೆಯುವ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬಹುದು. ಇಲ್ಲದಿದ್ದರೆ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಕಷ್ಟವಾಗುತ್ತದೆ ಎಂದು ಹೇಳಿದರು.

ದಲಿತರ ಮೇಲಿನ ಕೊಲೆ ಹಾಗೂ ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ 2013ರ ಪ್ರಕಾರ 65 ಕೊಲೆ, 118 ಅತ್ಯಾಚಾರ, 1703 ಇತರೆ ದೌರ್ಜನ್ಯ ಪ್ರಕರಣಗಳು ನಡೆದಿವೆ. 2014ರ ಪ್ರಕಾರ 68 ಕೊಲೆ, 144 ಅತ್ಯಾಚಾರ, 1829 ಇತರೆ ಪ್ರಕರಣಗಳು ಪ್ರತಿ ವರ್ಷ ಮರುಕಳಿಸಿವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News