ಓ ಮೆಣಸೇ..

Update: 2018-02-26 06:32 GMT

ತ್ರಿವಳಿ ತಲಾಖ್‌ನಂತಹ ಪದ್ಧತಿಯನ್ನು ರದ್ದು ಮಾಡಿರುವುದರಿಂದ ಮುಸ್ಲಿಂ ಮಹಿಳೆಯರ ಮತಗಳು ಖಂಡಿತಾ ಬಿಜೆಪಿಗೆ ಸಿಗಲಿದೆ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
ಮತ ಕೊಟ್ಟು ತಮ್ಮ ಕುಟುಂಬವನ್ನು ಜೈಲಿಗೆ ತಳ್ಳುವುದಕ್ಕೆ ಮುಸ್ಲಿಮ್ ಮಹಿಳೆಯರು ಜಶೋದಾ ಬೆನ್‌ನಷ್ಟು ದಡ್ಡಿಯರಲ್ಲ.
---------------------
ರಾಹುಲ್ ಗಾಂಧಿ ಪ್ರಚಾರ ಮಾಡಿದ ಕಡೆಯಲ್ಲೆಲ್ಲಾ ವಿರೋಧ ಪಕ್ಷಗಳೇ ಗೆದ್ದಿವೆ - ಪ್ರಹ್ಲಾದ್ ಜೋಶಿ, ಸಂಸದ
ಬಹುಶಃ ಬಿಜೆಪಿಗೆ ಈಗ ಇದೊಂದೇ ಭರವಸೆ ಎನ್ನುತ್ತೀರಾ?
---------------------
ಪ್ರಜಾಸತ್ತೆ ಎನ್ನುವುದು ಬಿಜೆಪಿಯ ಮೂಲ ತತ್ವ - ನರೇಂದ್ರ ಮೋದಿ, ಪ್ರಧಾನಿ
ನೋಟು ನಿಷೇಧದಲ್ಲಿ ಸತ್ತ ಪ್ರಜೆಗಳ ಲೆಕ್ಕ ನೋಡುವಾಗ ನಿಜ ಅನ್ನಿಸುತ್ತದೆ.
---------------------
ಲೋಕ ಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪಿಸುವ ಮೂಲಕ ಪ್ರಧಾನಿ ನನ್ನನ್ನು ರಾಷ್ಟ್ರ ನಾಯಕನನ್ನಾಗಿ ಮಾಡಿದ್ದಾರೆ -ಸಿದ್ದರಾಮಯ್ಯ, ಮುಖ್ಯಮಂತ್ರಿ
ಕಾಂಗ್ರೆಸ್ ನಾಯಕರು ನಿಮ್ಮನ್ನು ರಾಷ್ಟ್ರನಾಯಕರನ್ನಾಗಿ ಮಾಡಿಲ್ಲದೇ ಇರುವುದರ ಬಗ್ಗೆ ಆಕ್ಷೇಪವೇ?
---------------------
ನನ್ನ ಹೆಸರಲ್ಲೇ ರಾಮ ಇದ್ದಾನೆ - ರಮಾನಾಥ ರೈ, ಸಚಿವ
ಅದು ರಾಮ ಅಲ್ಲ, ರಮ್ ಎನ್ನುವುದು ಪೂಜಾರಿಯವರ ಕುಟುಕು.
---------------------
ಹಣ, ಹೆಸರಿಗಾಗಿ ಕಮಲ್ ಹಾಸನ್ ರಾಜಕೀಯಕ್ಕೆ ಬಂದಿಲ್ಲ - ರಜನಿಕಾಂತ್, ನಟ
ನೀವು ಅದಕ್ಕಾಗಿ ಬಂದಿದ್ದೀರಿ ಎಂದಾಯಿತು. 
---------------------
ಮುಂದಿನ ದಿನಗಳಲ್ಲಿ ಬಿಜೆಪಿಗೆ ಉಳಿಗಾಲವಿಲ್ಲ - ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಅಧ್ಯಕ್ಷ
ನಿಮ್ಮ ಅಳಿಗಾಲ ಆರಂಭವಾಗಿರುವ ಸಂಕೇತ ಅದು.
---------------------
ರಾಜಕೀಯ ಎನ್ನುವುದು ಚರಂಡಿಯಿದ್ದಂತೆ ಯಾರು ಬೇಕಾದರೂ ಅದರೊಳಗೆ ಬೀಳಬಹುದು -ಎಂ.ಕೆ.ಅಳಗಿರಿ, ಡಿಎಂಕೆ ಉಚ್ಛಾಟಿತ ನಾಯಕ
ಅದರೊಳಗೆ ಬಿದ್ದ ಮೇಲೆ ಹೊಳೆದ ಮಾತು.
---------------------
ಜೈಲಿಗೆ ಹೋಗಿ ಬಂದವರನ್ನು ಕಾಂಗ್ರೆಸ್ ತನ್ನತ್ತ ಸೆಳೆದುಕೊಳ್ಳುತ್ತಿದೆ - ಶ್ರೀರಾಮುಲು, ಸಂಸದ
ಯಡಿಯೂರಪ್ಪರಂಥವರನ್ನು ಕಟ್ಟಿಕೊಂಡು ಕಾಂಗ್ರೆಸ್ ಮಾಡುವುದೇನು?
---------------------
ಲೋಕಾಯುಕ್ತ ಇದ್ದಿದ್ದರೆ ಕಾಂಗ್ರೆಸ್‌ನ ಹಲವು ಸಚಿವರು ಜೈಲಿನಲ್ಲಿರುತ್ತಿದ್ದರು - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಅನುಭವದ ಮಾತು.
---------------------
ಸಿದ್ದರಾಮಯ್ಯ ವಾರಕ್ಕೊಮ್ಮೆ ಬೀಗರ ಊಟಕ್ಕೆ ಮೈಸೂರಿಗೆ ಬರುತ್ತಾರೆ - ಪ್ರತಾಪ್‌ಸಿಂಹ, ಸಂಸದ
ತಮ್ಮ ಪಕ್ಷದಲ್ಲಿ ಬೀಗರ ಊಟಕ್ಕೆ ಜೈಲಿಗೆ ಹೋಗಿ ಬರುವವರು ಇದ್ದಾರೆ. ಆ ಬಗ್ಗೆ ಏನಾದರೂ ಹೇಳಿ.
---------------------
ಜಗತ್ತಿಗೆ ಶಾಸ್ತ್ರ ಮತ್ತು ಶಸ್ತ್ರ ಪರಿಚಯಿಸಿದ ಹಿಂದೂ ಧರ್ಮ ಎಲ್ಲರಿಗೂ ಹಿತವನ್ನೇ ಬಯಸುತ್ತದೆ -ನಳಿನ್ ಕುಮಾರ್ ಕಟೀಲು, ಸಂಸದ
ಈ ಶಾಸ್ತ್ರ ಮತ್ತು ಶಸ್ತ್ರಕ್ಕೆ ಬಲಿಯಾದ ಈ ದೇಶದ ಕೆಳವರ್ಗದ ಜನರು ನಿಮ್ಮ ಮಾತನ್ನು ನಂಬುವುದು ಕಷ್ಟ.
---------------------
ಸಿದ್ದರಾಮಯ್ಯರದ್ದು ದಪ್ಪ ಚರ್ಮದ ಸರಕಾರ - ಶೋಭಾ ಕರಂದ್ಲಾಜೆ, ಸಂಸದೆ
ತಮಗೆ ಮೆದು ಚರ್ಮವೇ ಇಷ್ಟ ಎಂದು ಇದರರ್ಥವೇ?
---------------------
ಎಚ್.ಡಿ.ಕುಮಾರಸ್ವಾಮಿಯವರಿಗೆ ಸುಳ್ಳು ಹೇಳಲು ಸಹ ಬರುವುದಿಲ್ಲ - ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ಕಾಂಗ್ರೆಸ್‌ನವರು ಸ್ವಲ್ಪ ಅದನ್ನು ಕಲಿಸಬಾರದೇ?
---------------------
ಗೋಮಾಂಸ ತಿನ್ನಿ, ಆದರೆ ಸಂಭ್ರಮಾಚರಣೆ ಬೇಡ - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ಈ ದೇಶದಲ್ಲಿ ಬಡವರಿಗೆ ಮಾಂಸಾಹಾರ ಸಿಕ್ಕಿದ ದಿನವೇ ಸಂಭ್ರಮದ ದಿನ ಎನ್ನುವುದು ನಿಮಗಿನ್ನೂ ಗೊತ್ತಿಲ್ಲ.
---------------------
ಬ್ಯಾಂಕಿಂಗ್ ವ್ಯವಸ್ಥೆಗೆ ಮೋಸ ಮಾಡುವವರನ್ನು ಸರಕಾರ ಸುಮ್ಮನೆ ಬಿಡುವುದಿಲ್ಲ - ಅರುಣ್ ಜೇಟ್ಲಿ, ಕೇಂದ್ರ ಸಚಿವ
ಕೈ ಕಾಲು ಕಟ್ಟಿ ವಿದೇಶಕ್ಕೆ ರವಾನೆ ಮಾಡುತ್ತೀರಾ?
---------------------
ಬಿಜೆಪಿ ಅಧಿಕಾರಕ್ಕೆ ಬರುವುದು, ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಶತಃಸಿದ್ಧ - ಜೆ.ಎಂ.ಸಿದ್ದೇಶ್ವರ, ಸಂಸದ
ಅದನ್ನು ತಡೆಯಲು ಬಿಜೆಪಿಯೊಳಗೆ ಭಾರೀ ಪ್ರಯತ್ನ ನಡೆಯುತ್ತಿದೆ, ಹೆದರಬೇಡಿ
---------------------
ರಜನಿಕಾಂತ್ ಮತ್ತು ಕಮಲ್ ಹಾಸನ್ ಕಾಗದದ ಹೂವಿನಂತೆ - ಎಂ.ಕೆ.ಸ್ಟಾಲಿನ್, ಡಿಎಂಕೆ ಕಾರ್ಯಾಧ್ಯಕ್ಷ
ಕರುಣಾನಿಧಿಯವರು ಕಾಗದದ ಹುಲಿ.
---------------------
ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂ ತೀರ್ಪು ನನಗೆ ತೃಪ್ತಿ ತಂದಿಲ್ಲ - ದೇವೇಗೌಡ, ಮಾಜಿ ಪ್ರಧಾನಿ
ಇದು ರಾಜಕೀಯ ಬಾಯಾರಿಕೆ
---------------------
ಪ್ರಪಂಚ ಇರುವವರೆಗೆ ಅಪರಾಧಗಳಿರುತ್ತವೆ - ರಾಮಲಿಂಗಾರೆಡ್ಡಿ, ಸಚಿವ
ಹಾಗಾದರೆ ಕಾನೂನು ಸುವ್ಯವಸ್ಥೆಯ ಅಗತ್ಯವಿಲ್ಲ ಎನ್ನುತ್ತೀರಾ?
---------------------
ನಾನು ಜಿಗಣೆಯಂತೆ; ಹಿಡಿದರೆ ಬಿಡೋಲ್ಲ - ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ
ದೇಶವನ್ನು ಕಚ್ಚಿಕೊಂಡಿರುವ ಜಿಗಣೆ.
---------------------
ಶೋಭಾ-ಯಡಿಯೂರಪ್ಪ ಮದುವೆ ಸೀಡಿ ನನ್ನ ಬಳಿ ಇದೆ - ಪದ್ಮನಾಭ ಪ್ರಸನ್ನಕುಮಾರ್, ಕೆಜೆಪಿ ಸ್ಥಾಪಕ
ಪ್ರಸ್ಥ ಸಿಡಿ ಇದೆ ಎಂದು ಹೇಳಿದರೆ ಟಿವಿಯವರು ಓಡಿ ಬರಬಹುದು.
---------------------
ಅವಕಾಶ ಸಿಕ್ಕಿದರೆ ಪಾಕಿಸ್ತಾನದಲ್ಲಿ ಸ್ಪರ್ಧಿಸುವೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
ಸದ್ಯಕ್ಕೆ ಭಾರತದಲ್ಲಂತೂ ನಿಮಗೆ ಅವಕಾಶ ಸಿಗಲಾರದು 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...