ಮಂಡ್ಯ: ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಸೆಸ್ಕ್ ಕಚೇರಿಗೆ ಮುತ್ತಿಗೆ

Update: 2018-02-28 17:52 GMT

ಮಂಡ್ಯ, ಫೆ.28: ಸಮರ್ಪಕ ವಿದ್ಯುತ್ ಸರಬರಾಜಿಗಾಗಿ ಒತ್ತಾಯಿಸಿ ತಾಲೂಕಿನ ಕೆ.ಗೌಡಗೆರೆ ಗ್ರಾಮಸ್ಥರು ಮಾಜಿ ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಬುಧವಾರ ನಗರದ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಗ್ರಾಮಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ಕುಡಿಯುವ ನೀರು, ಕೃಷಿ ಚಟುವಟಿಕೆ ಹಾಗೂ ಮಕ್ಕಳ ಓದಿಗೆ ತೊಂದರೆಯಾಗಿದೆ. ರಾತ್ರಿ ವೇಳೆ ಹೆಂಗಸರು, ಮಕ್ಕಳು, ವೃದ್ಧರು ತಿರುಗಾಡಲು ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.

ಈ ಕುರಿತು ಸಂಬಂಧಿಸಿದವರಿಗೆ ಹಲವು ಬಾರಿ ದೂರು ನೀಡಿದ್ದರೂ ಕ್ರಮವಹಿಸಿಲ್ಲವೆಂದು ಕಿಡಿಕಾರಿದ ಅವರು, ಕೂಡಲೇ ಸಮಸ್ಯೆ ಪರಿಹಹರಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಶಶಿಧರ್, ಗ್ರಾಪಂ ಸದಸ್ಯ ಬಿಜೆ.ಮಹೇಶ್, ಸತೀಶ್, ಶಶಿಕಲಾ, ಜಿ.ಪಿ.ವೆಂಕಟೇಶ್, ಜಿ.ಪಿ.ಜಯರಾಂ, ಕೇಬಲ್ ನಾರಾಯಣ, ಇತರ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News