ಯುವತಿಯ ಬಲವಂತ ಮದುವೆಗೆ ಸಿದ್ದತೆ : ಪೊಲೀಸರಿಂದ ರಕ್ಷಣೆ

Update: 2018-03-01 17:14 GMT

ಮೈಸೂರು,ಮಾ.1: ಪೋಷಕರು ಬಲವಂತದ ಮದುವೆಗೆ ಸಿದ್ದತೆ ನಡೆಸಿದ್ದಾರೆಂದು ಯುವತಿಯೋರ್ವಳು ಆರೋಪಿಸಿ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಯುವತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ..

ಕೆ.ಆರ್.ಪೇಟೆಯ ಯುವತಿಯನ್ನು ಎಚ್.ಡಿ.ಕೋಟೆ ತಾಲೂಕಿನ ಕೂಲ್ಯ ಗ್ರಾಮದ ಅಜ್ಜಿ ಮನೆಯಲ್ಲಿ 1ತಿಂಗಳಿಂದ ಬಂಧನದಲ್ಲಿರಿಸಿ ಪೋಷಕರು ವಿವಾಹಕ್ಕೆ ಸಿದ್ದತೆ ನಡೆಸುತ್ತಿದ್ದರು. ಬಂಧನದಲ್ಲಿದ್ದುಕೊಂಡು ಮೊಬೈಲ್ ಮೂಲಕ ಮೈಸೂರು ಎಸ್.ಪಿ ಗೆ ಮೆಸೇಜ್ ಕಳಿಸಿ ರಕ್ಷಣೆ ಮಾಡುವಂತೆ ಮನವಿ ಯುವತಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಯುವತಿಯನ್ನು ರಕ್ಷಿಸುವಂತೆ ಎಸ್.ಪಿ ಯವರು ಎಚ್.ಡಿ.ಕೋಟೆ ಪೋಲಿಸರಿಗೆ ನಿರ್ದೇಶನ ನೀಡಿದ್ದು,ಪೊಲೀಸರು ಯುವತಿಯನ್ನು ರಕ್ಷಿಸಿ ಸಾಂತ್ವನ ಕೇಂದ್ರದ ವಶಕ್ಕೆ ಒಪ್ಪಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News