ಆನೆಕಾಡಿನಲ್ಲಿ ಅಗ್ನಿ ಅವಘಡ: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

Update: 2018-03-03 11:18 GMT

ಮಡಿಕೇರಿ, ಮಾ.3: ಕಳೆದ ವರ್ಷ ಬೆಂಕಿಯ ಕೆನ್ನಾಲೆಗೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದ ಆನೆಕಾಡು ಅರಣ್ಯದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ.

ಕುಶಾಲನಗರದಿಂದ ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಫಲಕಾರಿಯಾಗಿಲ್ಲ. ಸಂಜೆ ವೇಳೆಗೆ ಮೈಸೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಬದಿಗೂ ಬೆಂಕಿ ಆವರಿಸಿದ್ದು, ಪರಿಣಾಮ ಈ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಶುಕ್ರವಾರ ರಾತ್ರಿಯೂ ಅರಣ್ಯದಲ್ಲಿ ಬೆಂಕಿ ಜ್ವಾಲೆ ಕಾಣಿಸಿಕೊಂಡಿದ್ದು, ಕಳೆದ ಬಾರಿ ಸುಟ್ಟು ಕರಕಲಾಗಿದ್ದ ಅರಣ್ಯದಲ್ಲಿ ಮಳೆಗಾಲದಲ್ಲಿ ಬೆಳೆದಿದ್ದ ಕೆಲವು ಸಸ್ಯರಾಶಿ ಮತ್ತೆ ಬೆಂಕಿಗಾಹುತಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News