ಬಿಜೆಪಿ, ಕಾಂಗ್ರೆಸ್ ಸರಕಾರಗಳಿಂದ ಹಿಂದೂಗಳಿಗೆ ರಕ್ಷಣೆ ಇಲ್ಲ: ಪ್ರಮೋದ್ ಮುತಾಲಿಕ್ ಟೀಕೆ

Update: 2018-03-04 14:42 GMT

ಹುಬ್ಬಳ್ಳಿ, ಮಾ. 4: ‘ಬಿಜೆಪಿಯ ಜನ ಸುರಕ್ಷಾ ಯಾತ್ರೆ ಡೋಂಗಿ ಯಾತ್ರೆ. ಅದು ಜನ ಸುರಕ್ಷಾ ಯಾತ್ರೆ ಅಲ್ಲ. ಬದಲಿಗೆ ಅಧಿಕಾರ ಸುರಕ್ಷಾ ಯಾತ್ರೆ’ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇಂದಿಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಸರಕಾರಗಳಿಂದಲೂ ಹಿಂದೂಗಳಿಗೆ ಸುರಕ್ಷತೆ ಇಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನಾಹುತಕಾರಿ ಕೆಲಸ ಮಾಡುತ್ತಿವೆ ಎಂದು ಟೀಕಿಸಿದರು.

ಕನಸಿರಲಿಲ್ಲವೇ?..: ‘ಮೋದಿ ಕನಸು ನನಸು ಮಾಡಲು ಮತ್ತೊಮ್ಮೆ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸಿ’ ಎಂಬ ಬ್ಯಾನರ್ ಹುಬ್ಬಳ್ಳಿ ನಗರದಲ್ಲಿ ಕಟಿದ್ದಾರೆ. ಹೀಗಾದರೆ 35 ವರ್ಷದಲ್ಲಿ ಶೆಟ್ಟರ್ ಅವರಿಗೆ ಯಾವುದೇ ಕನಸು ಇರಲಿಲ್ಲವೇ? ಎಂದು ಮುತಾಲಿಕ್ ಲೇವಡಿ ಮಾಡಿದರು.

ಮಹದಾಯಿ ನದಿ ವಿವಾದ ಇತ್ಯರ್ಥ ವಿಚಾರದಲ್ಲಿ ಎಲ್ಲ ಪಕ್ಷಗಳು ಸೇರಿ ರೈತ ಸಮುದಾಯವನ್ನು ಒಡೆದು ಆಳುವ ಕೆಲಸ ಮಾಡುತ್ತಿವೆ. ಹೋರಾಟಗಾರರಿಗೆ ಶಕ್ತಿ ಉಳಿದಿಲ್ಲ. ಈ ಭಾಗದ ಜನರು ಯಾವ ಜನಪ್ರತಿನಿಧಿಗಳಿಗೂ ಓಟು ಹಾಕಬೇಡಿ. ನೀರು ತರುವವರೆಗೂ ನೋಟಾಗೆ ಮತ ಹಾಕಿ ಎಂದು ಮುತಾಲಿಕ್ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News