ಆಂಧ್ರದ ಎಲ್ಲ ಸಂಸದರು ರಾಜೀನಾಮೆ ನೀಡಲಿ: ಜಗನ್‍ಮೋಹನ್ ರೆಡ್ಡಿ

Update: 2018-03-08 11:16 GMT

ಅಮರಾವತಿ, ಮಾ. 8: ಕೇಂದ್ರ ಸರಕಾರದ ವಿರುದ್ಧ ಒತ್ತಡ ಹೇರಲು ಆಂಧ್ರದ ಎಲ್ಲ ಸಂಸದರು ರಾಜೀನಾಮೆ ನೀಡಬೇಕೆಂದು ವೈಎಸ್‍ಆರ್ ಕಾಂಗ್ರೆಸ್ ನಾಯಕ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ. ಈ ರೀತಿ ರಾಜೀನಾಮೆಯ ಮೂಲಕ ಕೇಂದ್ರ ಸರಕಾರವನ್ನು ಒತ್ತಡದಲ್ಲಿ ಸಿಲುಕಿಸಬಹುದು ಎಂದು ಅವರು ಹೇಳಿದ್ದಾರೆ.

 ಎಲ್ಲ ಸಂಸದರು ರಾಜೀನಾಮೆ ಪತ್ರ ಬರೆದು ಕೊಡಿ,. ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ. ಜೊತೆಗೆ ಸಂಸತ್ತಿನಲ್ಲಿ  ಹೆಚ್ಚಿನ ಎಲ್ಲ  ಪಾರ್ಟಿಗಳ ಬೆಂಬಲವನ್ನು ಪಡೆದುಕೊಳ್ಳಿ ಎಂದು ಜಗನ್‍ಮೋಹನ್ ಹೇಳಿದರು. ಆಂಧ್ರಕ್ಕೆ ವಿಶೇಷ ಕೊಡುವ ಭರವಸೆಯಲ್ಲಿ  ಆಂಧ್ರದ ವಿಭಜನೆ ನಡೆದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News