×
Ad

ಪುಸ್ತಕ ಅಧ್ಯಯನ ಮಾಡಿ ಉತ್ತಮ ಜೀವನ ರೂಪಿಸಿಕೊಳ್ಳಿ: ಸಾಹಿತಿ ನಾಗೇಶ್ ಕಾಲೂರು

Update: 2018-03-16 23:25 IST

ಮಡಿಕೇರಿ, ಮಾ.16: ಮೊಬೈಲ್ ಬಿಟ್ಟು, ಪುಸ್ತಕ ಓದಿದರೆ ಜೀವನ ಪೂರ್ತಿ ಉತ್ತಮ ಬದುಕು ರೂಪಿಸಿಕೊಳ್ಳಬಹುದು ಎಂದು ಸಾಹಿತಿ ನಾಗೇಶ್ ಕಾಲೂರು ಅವರು ಹೇಳಿದರು.   

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  ಪುಸ್ತಕದ ಪಾಠ ಒಂದು ಹಂತದವರೆಗೆ, ಆದರೆ ನಮಗೆ ಬೇಕಿರುವುದು ಬದುಕಿನ ಪಾಠ. ವಿದ್ಯಾಬ್ಯಾಸ ಎಲ್ಲಾ ಸಂದರ್ಭಲ್ಲೂ ಬರುವುದಿಲ್ಲ. ಬದುಕಿನ ಶಿಕ್ಷಣ ಕಲಿತಾಗ ಮಾತ್ರ ಬದುಕಿಗೆ ಮೌಲ್ಯ ದೊರೆಯುತ್ತದೆ ಎಂದು ಸಾಹಿತಿಗಳಾದ ನಾಗೇಶ್ ಕಾಲೂರು ಹೇಳಿದರು.  

ಮನುಷ್ಯತ್ವ ಇಲ್ಲದ ಶಿಕ್ಷಣಕ್ಕೆ ಕಿಂಚಿತ್ತು ಬೆಲೆಯಿಲ್ಲ, ಅಹಂಕಾರದಿಂದ ಮೆರೆಯದೆ ವಿದ್ಯಾರ್ಥಿಗಳು ಮಾನವೀಯ ಮೌಲ್ಯವಿರುವ  ಶಿಕ್ಷಣ ಕಲಿಯಬೇಕು ಹಾಗೂ ಎಲ್ಲರನ್ನೂ ಸಮಾನವಾಗಿ ನೋಡಬೇಕು. ಮೇಲು ಕೀಳು ತಾರತಮ್ಯ ಇರಬಾರದು. ಸಣ್ಣ ಸಣ್ಣ ಕಾಳಿನಿಂದ ದೊಡ್ಡ ರಾಶಿಯಾಗುತ್ತೆ ಸರ್ವರಲ್ಲೂ ಕಲಿಯುವುದು ಬಹಳಷ್ಠಿದೆ. ಅಂಗಾಂಗ ಇಲ್ಲದವರು ಸಾಧನೆ ಮಾಡುತ್ತಿದ್ದಾರೆ. ನಮಗೆ ಎಲ್ಲ ಅಂಗಗಳು ಚೆನ್ನಾಗಿದ್ದು ನಾವೇಕೆ ಸಾಧನೆ ಮಾಡಬಾರದು ಎನ್ನುವ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಅವಕಾಶ ಯಾರನ್ನು ಹುಡುಕಿಕೊಂಡು ಬರುವುದಿಲ್ಲ. ಅವಕಾಶವನ್ನು ನಾವೇ ಹುಡುಕಬೇಕು ಎಂದು ಸಾಹಿತಿಗಳಾದ ನಾಗೇಶ್ ಕಾಲೂರು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಜೆನ್ನಿಫರ್ ಲೋಲಿಟ ಅವರು ಮಾತನಾಡಿ, ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಇರುವ ಸಮಯವನ್ನು ಬಳಸಿಕೊಂಡು ಉನ್ನತ ಸ್ಥಾನಕ್ಕೆ ತಲುಪಿ ಎಂದು ಅವರು ತಿಳಿಸಿದರು. 

ಕೈಗಾರಿಕೋದ್ಯಮಿಯಾದ ಸುಕೀಶ್ ಚಂದ್ರಪ್ಪ ಮಾತನಾಡಿ ಮೌಲ್ಯಯುತ ಶಿಕ್ಷಣಕ್ಕೆ ಪೋಷಕರ ಪಾತ್ರ ಬಹಳ ಮುಖ್ಯ. ಸಾಧನೆ ಮಾಡಿದ ಮಾಹನೀಯರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬಡತನದಿಂದ ಕಷ್ಟಪಟ್ಟು ಓದಿದವರು. ಇಂದು ಅವರು ಜಗತ್ತಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಫೇಸ್‍ಪುಕ್, ವ್ಯಾಟ್ಸಪ್ ಇವುಗಳನ್ನು ಬಿಟ್ಟು ಶಿಕ್ಷಣದ ಕಡೆ ಹೆಚ್ಚು ಒತ್ತು ಕೊಡಿ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕರಾದ ಸತೀಶ್ ಎನ್.ಪಿ, ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಾದ ನಮೀತಾ, ಅರ್ಥಶಾಸ್ತ್ರ ವಿಭಾಗದ ಮಹೇಶ್, ಪ್ರಾದ್ಯಾಪಕರಾದ ದಾಮೊದರ್, ಅರಿಣಿ, ಸರಸ್ವತಿ, ವಿದ್ಯಾರ್ಥಿ ಸಮಿತಿಯ ಪದಾಧಿಕಾರಿಗಳಾದ ಕಾವ್ಯಶ್ರೀ ಟಿ.ಎಲ್, ಹರ್ಷಿತಾ ಬಿ.ಆರ್, ಕುಸುಮಿತ ಕೆ.ಕೆ, ರಾಧಿಕಾ ಬಿ.ಪಿ ತಶ್ಮಿತ ಬಿ.ಆರ್, ಅರ್ಪಿತಾ ರೈ ಬಿ.ಎಸ್ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News