ಓ ಮೆಣಸೇ..

Update: 2018-03-26 07:05 GMT

ನಾವು ಮೋದಿ ಮುಕ್ತ ಭಾರತ ನೋಡುವ ಕನಸು ಕಾಣುತ್ತಿದ್ದೇವೆ - ರಾಜ್ ಠಾಕ್ರೆ, ಎಂ.ಎನ್.ಎಸ್.ನಾಯಕ್

ಬಿಜೆಪಿಯೊಳಗೂ ಇದೇ ಕನಸು ಕಾಣುತ್ತಿರುವ ಹಲವರಿದ್ದಾರೆ. 

---------------------

ಮಹಾತ್ಮಾಗಾಂಧಿ ಕಟ್ಟಾ ಹಿಂದೂ ಆಗಿದ್ದರು - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಅದಕ್ಕಾಗಿಯೇ ತಾನೆ ಅವರನ್ನು ಕೊಂದಿರುವುದು.

---------------------

ವೀರಶೈವರು, ಲಿಂಗಾಯತರು ಹಿಂದೂ ಧರ್ಮದಿಂದ ಹೊರ ಹೋಗುವುದರಲ್ಲಿ ಅರ್ಥವಿಲ್ಲ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ಬ್ರಾಹ್ಮಣ ಧರ್ಮ ಹೊರಗೆ ಹೋಗುವುದಾದರೆ ನಾವು ಒಳಗುಳಿಯುತ್ತೇವೆ ಎನ್ನುವುದು ಅವರ ವಾದ.

---------------------

ಜೆಡಿಎಸ್‌ಗೆ ಅಧಿಕಾರ ನೀಡಿದರೆ ವಿಧಾನಸೌಧವನ್ನೇ ನಿಮ್ಮ ಮನೆಬಾಗಿಲಿಗೆ ತರುತ್ತೇನೆ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ನಿಮ್ಮ ಮನೆ ಬಾಗಿಲಿಗೆ?

 ---------------------

ಜಾತಿ ಜಗಳ ಹೆಚ್ಚಿಸುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ - ಡಿ.ವಿ.ಸದಾನಂದ ಗೌಡ,

ಕೇಂದ್ರ ಸಚಿವ ಯಡಿಯೂರಪ್ಪ-ಈಶ್ವರಪ್ಪರ ಜಗಳ ಯಾರು ಹುಟ್ಟಿಸಿ ಹಾಕಿದ್ದು?

---------------------

ಮಂಡ್ಯದಲ್ಲಿ ಕಾಂಗ್ರೆಸ್‌ಗೆ ನನ್ನಂತಹ ಲೀಡರ್ ಸಿಗ್ತಾರಾ? - ಅಂಬರೀಷ್, ಶಾಸಕ 

ಕಾಂಗ್ರೆಸ್‌ನ ದಯನೀಯ ಸ್ಥಿತಿಗೆ ಹಿಡಿದ ಕನ್ನಡಿ ನೀವು.

---------------------

ಬಿಜೆಪಿಯ ಷಡ್ಯಂತ್ರದಿಂದಾಗಿ ನಾನು 16ದಿನ ಜೈಲಿನಲ್ಲಿರಬೇಕಾಯಿತು - ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಮುಖಂಡ

ಜೀವನಪೂರ್ತಿ ಜೈಲಲ್ಲಿರಬೇಕಾಗಿತ್ತು ನೀವು. ನಿಜಕ್ಕೂ ಬಿಜೆಪಿಯದು ಷಡ್ಯಂತರವೇ ಸರಿ.

---------------------

ಕಾಂಗ್ರೆಸ್‌ಗೆ ಹಿಂದಿನಿಂದ ಚೂರಿಹಾಕಿದವರು ಯಾರೂ ಯಶಸ್ಸು ಕಂಡಿಲ್ಲ - ಅಭಯಚಂದ್ರ ಜೈನ್, ಶಾಸಕ

ಮುಂದಿನಿಂದಲೇ ಚೂರಿ ಹಾಕಿ ಎಂದು ಸಲಹೆಯೆ?

--------------------

ತಂದೆ, ಚಿಕ್ಕಪ್ಪ ಸೇರಿ ನನ್ನ ಪೂರ್ವಜರು ಮೂಲತಃ ಕಾಂಗ್ರೆಸಿಗರು - ಅಶೋಕ್ ಖೇಣಿ, ಶಾಸಕ

ಮನುಷ್ಯರ ಪೂರ್ವಜರ ಬಗ್ಗೆ ಡಾರ್ವಿನ್ ಬೇರೆಯೇ ತರ್ಕವನ್ನು ಹೊಂದಿದ್ದಾನೆ.

---------------------

ನನ್ನ ಹಿಂದಿರುವುದು ದೇವರು ಮತ್ತು ಜನರೇ ಹೊರತು ಬಿಜೆಪಿ ಅಲ್ಲ - ರಜನಿಕಾಂತ್, ನಟ 

ನಿಮ್ಮ ಮುಂದೆ ಇರುವುದರ ಕುರಿತಂತೆ ಜನರಿಗೆ ಅನುಮಾನವಿದೆ.

---------------------

ಶಿರೂರು ಸ್ವಾಮೀಜಿ ಮಾತುಗಳು ಸಂಶಯಾಸ್ಪದ -ರಘುಪತಿ ಭಟ್, ಮಾಜಿ ಶಾಸಕ

ಏನಿದ್ದೂ ಪದ್ಮಪ್ರಿಯ ಸಾವಿನಷ್ಟು ಅಲ್ಲ.

---------------------

ನಮೋ ಎಂದರೆ ನಮಗೇ ಮೋಸ - ಪ್ರಮೋದ್ ಮಧ್ವರಾಜ್, ಸಚಿವ

ಅಗತ್ಯ ಬಿದ್ದರೆ ಕಾಂಗ್ರೆಸ್‌ಗೆ ಮೋಸ. 

---------------------

ರಾಜಕಾರಣಿಗಳಿಗೆ ಧಾರ್ಮಿಕ ವಿಚಾರಗಳನ್ನು ಬಗೆಹರಿಸುವ ಯೋಗ್ಯತೆ ಇನ್ನೂ ಬಂದಿಲ್ಲ - ಸಿ.ಟಿ.ರವಿ, ಶಾಸಕ 

ಧಾರ್ಮಿಕ ವಿಚಾರಗಳನ್ನು ರಾಜಕೀಯಗೊಳಿಸುವ ಯೋಗ್ಯತೆಯಷ್ಟೇ ಅವರದು.

---------------------

ದೇಶಕ್ಕಾಗಿ ಸಾಯುವುದಲ್ಲ, ದೇಶಕ್ಕಾಗಿ ಬದುಕಬೇಕು ಎಂದು ಆರೆಸ್ಸೆಸ್ ನಮಗೆ ಹೇಳಿಕೊಟ್ಟಿದೆ - ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಪ್ರಮುಖ್

ಇತರರನ್ನು ಸಾಯಿಸಿ ನೀವೊಬ್ಬರೇ ಬದುಕುವುದೇ?

---------------------

ಬಿಜೆಪಿಯಲ್ಲಿ ಜೈಲಿಗೆ ಹೋಗದೇ ಇದ್ದವರು ಯಾರಾದರೂ ಇದ್ದರೆ ಕಾಂಗ್ರೆಸ್‌ಗೆ ಬರಲಿ - ಶಾಮನೂರು ಶಿವಶಂಕರಪ್ಪ, ಶಾಸಕ 

ಮುಂದಿನ ಬಾರಿ ಬಿಜೆಪಿಯ ಶಾಸಕಾಂಗ ಸಭೆ ಜೈಲಿನಲ್ಲೇ ಹಮ್ಮಿಕೊಳ್ಳುತ್ತಾರಂತೆ.

---------------------

ಬಿಜೆಪಿ ಕೌರವರ ಪಕ್ಷ, ಕಾಂಗ್ರೆಸ್ ಪಾಂಡವರು - ರಾಹುಲ್‌ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಸೀರೆ ಎಳೆಸಿಕೊಳ್ಳುವವರು ಯಾರು?

---------------------

ಬ್ರಾಹ್ಮಣರೂ ಪ್ರತ್ಯೇಕ ಧರ್ಮದ ಮಾನ್ಯತೆ ಪಡೆದರೆ ತಪ್ಪೇನಿಲ್ಲ - ಎಂ.ಬಿ.ಪಾಟೀಲ್, ಸಚಿವ

ದೇಶದ ಸರ್ವ ಸಾಮಾಜಿಕ ಸಮಸ್ಯೆಗಳಿಗೆ ಅದುವೇ ಪರಿಹಾರ.

---------------------

ನನ್ನ ರಾಜಕೀಯ ಏಳಿಗೆಗೆ ಸಂಘ ಪರಿವಾರದ ರೀತಿ ಯಡಿಯೂರಪ್ಪರೂ ಕಾರಣ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ

ಅದಕ್ಕಾಗಿ ಅವರಿಬ್ಬರೂ ಈಗ ಪರಿತಪಿಸುತ್ತಿದ್ದಾರೆ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...