ಗುಂಡ್ಲುಪೇಟೆ : ದೇವಸ್ಥಾನದೊಳಗೆ ಚಪ್ಪಲಿ ಎಸೆದ ದುಷ್ಕರ್ಮಿಗಳು
Update: 2018-03-31 14:31 GMT
ಗುಂಡ್ಲುಪೇಟೆ,ಮಾ.31: ಪಟ್ಟಣದ 12 ನೇ ಬಡಾವಣೆಯಲ್ಲಿರುವ ವಿಘ್ನೇಶ್ವರನ ದೇವಸ್ಥಾನದೊಳಗೆ ದುಷ್ಕರ್ಮಿಗಳು ಚಪ್ಪಲಿ ಎಸೆದಿರುವ ಘಟನೆ ನಡೆದಿದೆ.
ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರಿನ ನಾಯಕರ ಬಡಾವಣೆಯಲ್ಲಿರುವ ದೇವಸ್ಥಾನದಲ್ಲಿ ದುಷ್ಕೃತ್ಯ ನಡೆದಿದ್ದು ಬೆಳಗ್ಗೆ ಅರ್ಚಕರು ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ.
ಕಳೆದ ರಾತ್ರಿ ಚಪ್ಪಲಿಗಳು, ಕಲ್ಲು ಹಾಗೂ ಬಾಳೆಹಣ್ಣುಗಳನ್ನು ಒಳಗೆ ಎಸೆದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಕೆಲಕಾಲ ಉದ್ವಿಘ್ನ ಪರಿಸ್ಥಿತಿಯುಂಟಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪಟ್ಟಣ ಠಾಣೆಯ ಪಿ ಎಸ್ ಐ ಬಿ.ಎಸ್.ಶಿವರುದ್ರ ಪರಿಶೀಲನೆ ನಡೆಸಿ ದುಷ್ಕರ್ಮಿಗಳ ಪತ್ತಗೆ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಈ ಬಗ್ಗೆ ಬಡಾವಣೆಯ ನಿವಾಸಿ ವೆಂಕಟೇಶ್ ನೀಡಿದ ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.