ಓ ಮೆಣಸೇ..!

Update: 2018-04-02 05:42 GMT

ಬುದ್ಧಿ ಜೀವಿಗಳಿಂದ ದೇಶ ಹಾಳಾಗಿದೆ - ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ

►ತಮ್ಮನ್ನು ತಾವು ಬುದ್ಧಿ ಇಲ್ಲದ ಜೀವಿ ಎಂದು ಕರೆದುಕೊಳ್ಳುತ್ತಿದ್ದೀರಿ.

---------------------

ನರೇಂದ್ರ ಮೋದಿ ಒಬ್ಬ ಶೋಮ್ಯಾನ್ - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

►ವಿರೋಧ ಪಕ್ಷಗಳ ವೈಫಲ್ಯಗಳ ಲಾಭ ಪಡೆದಿದ್ದಾರೆ ಅಷ್ಟೇ.

---------------------

ಬಿಳಿಯರ ಮುಂದೆ ಬೆತ್ತಲಾಗಲು ನಮಗೆ ಹಿಂಜರಿಕೆಯಿಲ್ಲ - ಕೆ.ಜೆ.ಅಲ್ಫೋನ್ಸ್, ಕೇಂದ್ರ ಸಚಿವ

►ಅದಕ್ಕಾಗಿ ನಾವು ದೇಶದೊಳಗೆ ಬಟ್ಟೆ ಹಾಕಿಕೊಳ್ಳಲೇಬಾರದೆ?

---------------------

ಯಶಸ್ಸು ಸಾಧಿಸಬೇಕೆಂದರೆ ಶ್ರೀಮಂತ ಕುಟುಂಬದಲ್ಲೇ ಜನಿಸಬೇಕಿಲ್ಲ - ನರೇಂದ್ರ ಮೋದಿ, ಪ್ರಧಾನಿ

►ಅಂಬಾನಿಯಂತಹ ಶ್ರೀಮಂತರ ಚೇಲ ಆದರೂ ಸಾಕು ಅಂತೀರಾ?

---------------------

ಸಮಾಜದಿಂದ ಪಡೆದುಕೊಂಡದ್ದನ್ನು ಕಿಂಚಿತ್ತಾದರೂ ಮರಳಿಸೋಣ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

►ಸಮಾಜದಿಂದ ಕಿತ್ತುಕೊಂಡದ್ದನ್ನು ಒಪ್ಪಿಕೊಂಡಂತಾಯಿತು.

---------------------

ಚುನಾವಣೆ ಮತ್ತು ಯುದ್ಧಕ್ಕೆ ಹೆಚ್ಚಿನ ವ್ಯತ್ಯಾಸವಿಲ್ಲ - ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ

► ಅದಕ್ಕಾಗಿಯೇ ಸೇನೆಯನ್ನು ದುರ್ಬಳಕೆ ಮಾಡುತ್ತಿದ್ದೀರಿ ಎಂದಾಯಿತು.

---------------------

ಕಾಂಗ್ರೆಸ್ ತೇಲಲೂ ಆಗದ ಮುಳುಗಲೂ ಆಗದ ಪರಿಸ್ಥಿತಿಯಲ್ಲಿದೆ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

►ಸಂಪೂರ್ಣ ಮುಳುಗಿದವರ ಪರಿಸ್ಥಿತಿಗಿಂತ ವಾಸಿ.

---------------------

ಬಾಯ್‌ಫ್ರೆಂಡ್ ಇಲ್ಲದಿದ್ದರೆ ಹುಡುಗಿಯರು ಸುರಕ್ಷಿತವಾಗಿರುತ್ತಾರೆ - ಪನ್ನಾಲಾಲ್ ಶಾಕ್ಯ, ಮಧ್ಯಪ್ರದೇಶ ಶಾಸಕ

►ಜಗತ್ತಿನಲ್ಲಿ ಗಂಡಸರ ಅಸ್ತಿತ್ವವೇ ಇಲ್ಲದಿದ್ದರೆ ಹುಡುಗಿಯರು ಸಂಪೂರ್ಣ ಸುರಕ್ಷಿತರು ಎಂದು ಹೇಳಲಿಲ್ಲ, ಪುಣ್ಯ.

---------------------

ವ್ಯಾಪಾರಿಯೊಬ್ಬ ಅಧಿಕಾರಕ್ಕೆ ಬಂದರೆ ಪ್ರಜೆಗಳು ಭಿಕಾರಿಯಾಗುತ್ತಾರೆ - ಸಿ.ಎಂ.ಇಬ್ರಾಹೀಂ, ಕಾಂಗ್ರೆಸ್ ನಾಯಕ

► ತಮ್ಮ ವ್ಯಾಪಾರ ಕಾಂಗ್ರೆಸ್‌ನೊಳಗೆ ಕುದುರಿದ ಲಕ್ಷಣಗಳು ಕಾಣುತ್ತಿವೆ.

---------------------

ರಾಹುಲ್ ಗಾಂಧಿಗೆ ರಾಜಕೀಯ ಜ್ಞಾನವಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

►ತಮ್ಮ ಮೊಮ್ಮಗ ರಾಜಕೀಯದಲ್ಲಿ ಪಿಎಚ್‌ಡಿ ಮಾಡಿರಬೇಕಲ್ಲ?

---------------------

ಧರ್ಮ ಒಡೆಯುವವರು ಪಾಕಿಸ್ತಾನದ ಏಜೆಂಟರು - ಡಾ.ಚನ್ನಸಿದ್ದರಾಮಶ್ರೀ, ಶ್ರೀಶೈಲ ಪೀಠ

► ಕುದುರೆಯೇರಿದ್ದಕ್ಕೆ ದಲಿತರನ್ನು ಕೊಲ್ಲುವವರು ಯಾರ ಏಜೆಂಟರು?

---------------------

ವೀರಶೈವರು ಸಂಘ ಅಥವಾ ಲಿಂಗ ಒಂದನ್ನು ಆಯ್ಕೆ ಮಾಡಿಕೊಳ್ಳಲಿ - ಡಾ.ಚಂದ್ರಶೇಖರ ಪಾಟೀಲ, ಸಾಹಿತಿ

►ಅವರಿಗೆ ಸಂಘದೊಳಗಿರುವ ಲಿಂಗವೇ ಇಷ್ಟವಂತೆ.

---------------------

ಬಿಜೆಪಿಯ ಮೂಲ ಬೇರು ಸುಳ್ಯದಲ್ಲಿದೆ - ಡಾ.ತೇಜಸ್ವಿನಿ ರಮೇಶ್, ಬಿಜೆಪಿ ವಕ್ತಾರೆ

► ಈ ಬಾರಿ ಸುಳ್ಯದ ಗೌಡರು ಆ ಬೇರನ್ನು ಹುಡುಕಿ ಬುಡದಿಂದಲೇ ಕಿತ್ತು ನಿಮ್ಮ ಕೈಗಿಡಲಿದ್ದಾರೆ.

---------------------

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಲಿದೆ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ

► ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರೈತರ ಹತ್ಯೆ ನಡೆದದ್ದೇ ಜಾಸ್ತಿ.

---------------------

ಅನಗತ್ಯ ಟೀಕೆಗಳಿಂದ ಬಿಜೆಪಿ ಗಟ್ಟಿಗೊಳ್ಳುತ್ತದೆ - ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ಸದಸ್ಯ

►ಅದಕ್ಕೇ ಪಕ್ಷದೊಳಗಿನ ನಾಯಕರೇ ಬಿಜೆಪಿಯ ಟೀಕೆಗೆ ಇಳಿದಿರುವುದು.

---------------------

ಯಡಿಯೂರಪ್ಪ ಅಪರಾಧಿ ಅಲ್ಲ, ಜಾಮೀನು ಸಿಗದ ಕಾರಣ ಜೈಲಿನಲ್ಲಿದ್ದರು - ಸಿ.ಟಿ.ರವಿ, ಶಾಸಕ

► ಜಾಮೀನು ಸಿಗದಷ್ಟು ದೊಡ್ಡ ತಪ್ಪು ಮಾಡಿದ್ದಾರೆ ಎಂದಾಯಿತು.

---------------------

ದೇವೇಗೌಡರ ಆಡಳಿತದ ಬಗ್ಗೆ ಪುಸ್ತಕವೇ ಇದೆ - ಎಚ್.ಡಿ. ರೇವಣ್ಣ , ಮಾಜಿ ಸಚಿವ

►ಯಾವ ವಿಶ್ವವಿದ್ಯಾನಿಲಯದಲ್ಲಿ ಎನ್ನುವುದನ್ನೂ ಹೇಳಿ ಬಿಡಿ.

---------------------

ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ದಿನಗಣನೆ ಆರಂಭವಾಗಿದೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

► ಯಡಿಯೂರಪ್ಪ ಮುಕ್ತ ಬಿಜೆಪಿಗಾಗಿ ರಾಷ್ಟ್ರಮಟ್ಟದಲ್ಲಿ ಅಮಿತ್ ಶಾ ಯೋಜನೆ ರೂಪಿಸಿದ್ದಾರಂತೆ.

---------------------

ಎಸ್ಪಿ-ಬಿಎಸ್ಪಿ ಮೈತ್ರಿಯಲ್ಲಿ ಒಡಕು ಮೂಡಿಸಲು ಬಿಜೆಪಿ ಎಲ್ಲ ರೀತಿಯ ಸಂಚು ರೂಪಿಸುತ್ತಿದೆ - ಅಖಿಲೇಶ್ ಯಾದವ್, ಎಸ್ಪಿ ಮುಖ್ಯಸ್ಥ

► ನೀವು ಒಗ್ಗಟ್ಟಾದ ಆನಂತರವಲ್ಲವೆ ಒಡಕು ಮೂಡಿಸುವ ಮಾತು.

---------------------

ಇಡೀ ದೇಶವೇ ಒಂದು ಕುಟುಂಬ ಎಂಬ ಕಲ್ಪನೆ ನಮ್ಮದು - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ

►ದೇಶವನ್ನು ಒಡೆದು ಸಣ್ಣ ಸಣ್ಣ ಕುಟುಂಬ ಮಾಡುವುದು ಆರೆಸ್ಸೆಸ್‌ನ ಸದ್ಯದ ಯೋಜನೆಯೇ?

---------------------

ರಾಹುಲ್ ಗಾಂಧಿ ‘ಪಾಪ ಪಾಂಡು’ ಇದ್ದಂತೆ - ಎಚ್.ವಿಶ್ವನಾಥ್, ಜೆಡಿಎಸ್ ಮುಖಂಡ

► ಪಾಪಿ ಪಾಂಡು ಆಗುವುದಕ್ಕಿಂತ ವಾಸಿ.

---------------------

ನಾನು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ - ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

►ಆಸೆಯೇ ದುಃಖಕ್ಕೆ ಕಾರಣ, ಬುದ್ಧನ ಮಾತು ಕೇಳಿಲ್ಲವೇ? ಮೊದಲು ವಿಧಾನಸಭೆಗೆ ಚುನಾವಣೆಗೆ ನಿಂತು ಗೆಲ್ಲಿ

---------------------

ಮೋದಿಗಿಂತಲೂ ಮೊದಲು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅನುಭವ ನನಗಿದೆ - ಚಂದ್ರ ಬಾಬು ನಾಯ್ಡು, ಆಂಧ್ರ ಮುಖ್ಯಮಂತ್ರಿ

► ಆದರೆ ಮುಖ್ಯಮಂತ್ರಿಯಾಗಿ ಹತ್ಯಾಕಾಂಡಕ್ಕೆ ಅವಕಾಶ ನೀಡಿದ ಅನುಭವ ನಿಮಗಿದೆಯೇ?

---------------------

ಬಿಜೆಪಿಯನ್ನು ಸೋಲಿಸಲು ಎಲ್ಲ ವಿರೋಧ ಪಕ್ಷಗಳು ಒಗ್ಗೂಡಬೇಕು - ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

► ಸೋಲಿಸಿದ ಬಳಿಕ ಕಚ್ಚಾಡೋಣ ಅಂತೀರಾ?

---------------------

ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯವನ್ನು ತುಂಬುವ ಕಾರ್ಯವನ್ನು ಬಿಜೆಪಿ ನಾಯಕರು ಮಾಡಬೇಕು - ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ

► ಅನೈತಿಕ ಸ್ಥೈರ್ಯವನ್ನಷ್ಟೇ ಅವರು ತುಂಬಬಲ್ಲರು.

---------------------

ಈಶ್ವರಪ್ಪ - ಯಡಿಯೂರಪ್ಪ ಅಣ್ಣ-ತಮ್ಮಂದಿರಂತೆ -ಮುರುಳೀಧರರಾವ್, ಬಿಜೆಪಿ ರಾಜ್ಯ ಉಸ್ತುವಾರಿ

►ಯಾರು ಅಣ್ಣ, ಯಾರು ತಮ್ಮ ಎನ್ನುವ ವಿಷಯಗಳಲ್ಲಿ ಜಗಳವಿದೆಯಂತೆ.

---------------------

ಟಿಕೆಟ್ ಸಿಗದಿದ್ದರೆ ಪಕ್ಷದ ಗೆಲುವಿಗೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ

► ಯಾವ ಪಕ್ಷದ ಗೆಲುವಿಗೆ?

---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...