×
Ad

ಶೈಕ್ಷಣಿಕವಾಗಿ ಹಿಂದುಳಿದ ಭಾಗದಲ್ಲಿ ಮುಜಾಫರ್ ಅಸ್ಸಾದಿಯವರ ನಾಯಕತ್ವ ಅತ್ಯಗತ್ಯ: ಪ್ರೊ.ಜೆ.ಸೋಮಶೇಖರ್

Update: 2018-04-03 22:13 IST

ಮೈಸೂರು,ಏ.3: ಶೈಕ್ಷಣಿಕವಾಗಿ ಹಿಂದುಳಿದ ಭಾಗದಲ್ಲಿ ಪ್ರೊ.ಮುಜಾಫರ್ ಆಸ್ಸಾದಿ ಅಂತವರ ನಾಯಕತ್ವ ಅತ್ಯಗತ್ಯ ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೊಮಶೇಖರ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದ ಪತ್ರಿಕೋದ್ಯಮ ವಿಭಾಗದ ಸೆಮಿನಾರ್ ಹಾಲ್ ಮಂಗಳವಾರ ರಾಜ್ಯಶಾಸ್ತ್ರ ಅದ್ಯಯನ ವಿಭಾಗದವತಿಯಿಂದ ರಾಯಚೂರು ವಿಶ್ವವಿದ್ಯಾನಿಲಯಕ್ಕೆ ವಿಶೇಷಾಧಿಕಾರಿಯಾಗಿ ನೇಮಕವಾಗಿರುವ ಪ್ರೊ.ಮುಜಾಫರ್ ಆಸ್ಸಾದಿಯವರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕನಾಗಿದ್ದ ವೇಳೆ ನಾನು ಅವರಿಂದ ಹೆಚ್ಚು ಸಲಹೆ ಪಡೆಯುತ್ತಿದ್ದೆ. ಯಾವಾಗಲೂ ಅವರಿಗೆ ಸಮಾಜದ ಕೆಳಸ್ತರದ ಸಮುದಾಯಗಳ ಕುರಿತು ನ್ಯಾಯ ಒದಗಿಸಿಕೊಡಬೇಕೆನ್ನುವ ಕಾಳಜಿ. ಪ್ರಮುಖವಾದ ಜವಾಬ್ದಾರಿಯುತ ಸ್ಥಾನದಲ್ಲಿ ಸರಕಾರ ನೇಮಿಸಿದಾಗ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ತಾನು ಏನು ಎನ್ನುವುದನ್ನು ನಿರೂಪಿಸಿದ್ದಾರೆ ಎಂದು ಹೇಳಿದರು.

ಮುಜಾಫರ್ ಅಸ್ಸಾದಿಯವರಲ್ಲಿ ಕಿರಿಯರಿಗೆ ಉತ್ಸಾಹ ತುಂಬುತ್ತ, ಹಿರಿಯರಲ್ಲಿ ಸ್ನೇಹಭಾವ ತೋರುತ್ತ ಕೆಲಸ ಮಾಡುವ ಸ್ವಭಾವವನ್ನು ಕಂಡಿದ್ದೇನೆ. ರಾಯಚೂರು ನೂತನ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿಯಾಗಿ ನೇಮಕವಾಗಿದ್ದಾರೆ. ಬಹುದೊಡ್ಡ ಕೆಲಸ. ಹೆಚ್ಚು ಅನುಭವವುಳ್ಳವರು. ಅವರ ವ್ಯಕ್ತಿತ್ವಕ್ಕೆ ಅವರ ಸಾಮರ್ಥ್ಯಕ್ಕೆ ಚಳುವಳಿ ಜೊತೆ ಬೆರೆತಿರುವುದರಿಂದ ಸಮಸ್ಯೆಗಳನ್ನು ಪರಿಹರಿಸಲು ಮುಂದಾದವರು. ಸಮಸ್ಯೆಗಳು ಬಂದಾಗ ಧೃತಿಗೆಡದೇ ಪ್ರಭುದ್ಧತೆಯ ನೆಲೆಯಲ್ಲಿ ಆತಂಕದ ವಿದ್ಯಾಮಾನಗಳಲ್ಲಿ ಅರಗಿಸಿಕೊಂಡಿದ್ದರು. ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಷ್ಟೇ ಅಲ್ಲ, ಅನ್ನದಾತರೂ ಕೂಡ ಹೌದು. ಅನೇಕ ಸವಾಲುಗಳನ್ನು ಸ್ವೀಕರಿಸಿ ನ್ಯಾಯ ಒದಗಿಸಿಕೊಟ್ಟಿದ್ದೀರಿ. ಶೈಕ್ಷಣಿಕವಾಗಿ ಹಿಂದುಳಿದ ಭಾಗದಲ್ಲಿ ನಿಮ್ಮ ನಾಯಕತ್ವ ಅತ್ಯಗತ್ಯ ಎಂದರು.

ಇದೇ ವೇಳೆ ಪ್ರೊ. ಮುಜಾಫರ್ ಆಸ್ಸಾದಿ ದಂಪತಿಯನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭ ಬಳ್ಳಾರಿ ಶ್ರೀಕೃಷ್ಣದೇವರಾಯ ವಿವಿ ನಿವೃತ್ತ ಕುಲಪತಿ ಪ್ರೊ.ಮಂಜಪ್ಪ ಡಿ.ಹೊಸಮನಿ, ಅಧ್ಯಕ್ಷರು ಪ್ರೊ.ಜಿ.ಟಿ.ರಾಮಚಂದ್ರಪ್ಪ, ಸಹಾಯಕ ಪ್ರಾಧ್ಯಾಪಕ ಡಾ.ಕೃಷ್ಣ ಹೊಂಬಾಳ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News