ಸಿದ್ಧಗಂಗಾಶ್ರೀಗಳ ಭೇಟಿಯಾದ ರಾಹುಲ್
Update: 2018-04-04 18:29 GMT
ಬೆಂಗಳೂರು ವಿಭಾಗದ ಜನಾಶೀರ್ವಾದ ಯಾತ್ರೆಗೆ ತುಮಕೂರಿಗೆ ಆಗಮಿಸಿದ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ, ಸಿದ್ದಗಂಗಾ ಮಠಕ್ಕೆ ಆಗವಿಸಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ 111ನೇ ಜನ್ಮದಿನೋತ್ಸವಕ್ಕೆ ಶುಭಕೋರಿ, ಗುರುವಂದನೆ ಸಲ್ಲಿಸಿ, ಆಶೀರ್ವಾದ ಪಡೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೇಂದ್ರದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಟಿ.ಬಿ. ಜಯಚಂದ್ರ, ಡಿ.ಕೆ.ಶಿವಕುಮಾರ್, ಶಾಸಕರಾದ ಕೆ.ಎನ್.ರಾಜಣ್ಣ, ಡಾ.ರಫೀಕ್ ಅಹಮದ್ ಮತ್ತಿತರರು ಜೊತೆಗಿದ್ದರು.