ಹನೂರು: ಟೌನ್ ಯೂತ್ ಕಾಂಗ್ರೆಸ್‍ನ ಪ್ರಥಮ ಅಧ್ಯಕ್ಷರಾಗಿ ಸತೀಶ್‍ ಆಯ್ಕೆ

Update: 2018-04-07 10:55 GMT

ಹನೂರು,ಎ.07: ಹನೂರು ಟೌನ್ ಯೂತ್ ಕಾಂಗ್ರೆಸ್‍ನ ಪ್ರಥಮ ಅಧ್ಯಕ್ಷರಾಗಿ ಸತೀಶ್‍ರವರು ಆಯ್ಕೆಯಾದರು. ಪಟ್ಟಣದ ಕಾಂಗ್ರೆಸ್‍ ಕಚೇರಿಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಶಾಸಕ ಆರ್ ನರೇಂದ್ರರಾಜೂಗೌಡ ನೇಮಕಾತಿ ಆದೇಶ ಪ್ರತಿಯನ್ನು ನೀಡಿ ಅಭಿನಂದಿಸಿದರು. 

ನಂತರ ಮಾತನಾಡಿದ ಶಾಸಕ ಆರ್ ನರೇಂದ್ರರಾಜೂಗೌಡ, ದೇಶ ಅಭಿವೃದ್ದಿಯಲ್ಲಿ ಯುವಕರ ಪಾತ್ರ ಮಹತ್ತರವಾಗಿದೆ. ಯಾವುದೇ ಒಂದು ಕಾರ್ಯದ ಯಶಸ್ಸಿಗೆ ಹಿರಿಯರು ಮಾರ್ಗದರ್ಶಕರಾದರೆ ಯುವಕರ ಹೋರಾಟವೇ ಮುಖ್ಯವಾಗಿದೆ. ಆಲ್ಲದೇ ವಿಧಾನ ಸಭೆಯ ಚುನಾವಣೆ ಮುಂದಿನ ತಿಂಗಳ ನಡೆಯುವುದರಿಂದ ಪಕ್ಷ ಸಂಘಟನೆಯಲ್ಲಿ ಯುವಕರು ಸಕ್ರಿಯವಾಗಿ ತೊಡಗಿ ಮತ್ತು ಪ್ರತಿಯೊಂದು ವಾರ್ಡಗಳಲ್ಲಿಯೂ ಸಂಘಟನೆ ಮಾಡಿ ರಾಜಕೀಯ ಆಸಕ್ತಿಯಿರುವ ಹೆಣ್ಣು ಮಕ್ಕಳಿಗೆ ಸಂಘಟನೆಯಲ್ಲಿ ತೊಡಿಗುವಂತೆ ಪ್ರೇರೇಪಿಸಿ, ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ತನ್ನಿ ಎಂದರು.

ಸಮಾರಂಭದಲ್ಲಿ ತಾಪಂ ಅದ್ಯಕ್ಷರಾದ ರಾಜು, ಸ್ಥಾಯಿ ಸಮಿತಿ ಅದ್ಯಕ್ಷರಾದ, ಜಾವದ್‍ಅಹಮದ್  ಪಪಂ ಉಪಾದ್ಯಕ್ಷರಾದ ಬಸವರಾಜು ಪಪಂ ಮಾಜಿ ಅದ್ಯಕ್ಷರಾದ ರಾಜೂಗೌಡ, ಜಿಲ್ಲಾ ಯೂತ್ ಕಾಂಗ್ರೆಸ್‍ ಅಧ್ಯಕ್ಷ ಚೇತನ್ ದೋರೈರಾಜ್, ತಾ ಅದ್ಯಕ್ಷ ರಾಯಿಲ್, ಕಾರ್ಯದರ್ಶಿ ಮಾದೇಶ್, ಮುಖಂಡರಾದ ಚಿಕ್ಕತಮ್ಮಯ್ಯಗೌಡ, ಕೃಷ್ಣ, ಜಯಪ್ರಕಾಶ್‍ಗುಪ್ತ,ಮಾದೇಶ್ ಮಹೇಶ್ ,ರಮೇಶ್ , ನಟರಾಜು ಮತ್ತು ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News