ಓ ಮೆಣಸೇ..

Update: 2018-04-09 09:19 GMT

ಧರ್ಮದಲ್ಲಿ ರಾಜಕಾರಣ ಬೆರೆಸಬಾರದು - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ಧರ್ಮದಲ್ಲಿ ವಿಷವನ್ನು ಬೆರೆಸಿ ಯಶಸ್ವಿಯಾದವರಿಂದ ಸಲಹೆ.

---------------------
ಮಾಜಿ ಸಚಿವ ಜನಾರ್ದನ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಬಳ್ಳಾರಿಯಿಂದ ಬರುತ್ತಿದ್ದ ಹಣದ ಕಂತೆಗಳು ಸ್ಥಗಿತವಾಗಿದೆಯೇ?
---------------------
ರಾಜಕೀಯದಲ್ಲಿ ಬ್ರಾಹ್ಮಣರಿಗೆ ಸೂಕ್ತ ಸ್ಥಾನಮಾನ ಅಗತ್ಯವಿದೆ. -ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಹಿಂದೂಗಳಿಗೆ ಸೂಕ್ತ ಸ್ಥಾನಮಾನ ಸಿಗದಿದ್ದರೂ ಪರವಾಗಿಲ್ಲ ಎನ್ನುತ್ತೀರಾ?
---------------------
ಕಾಂಗ್ರೆಸ್ ಮುಕ್ತ ಭಾರತ ಆರೆಸ್ಸೆಸ್ ಭಾಷೆಯಲ್ಲ - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಸಂವಿಧಾನ ಮುಕ್ತ ಎನ್ನುವುದಷ್ಟೇ ಆರೆಸ್ಸೆಸ್ ಭಾಷೆ.

---------------------
ಅಂಬೇಡ್ಕರ್‌ಗೆ ಅವಮಾನ ಮಾಡಿದರೆ ದೇಶಕ್ಕೇ ಅವಮಾನ ಮಾಡಿದಂತೆ -ಸಾವಿತ್ರಿ ಬಾಯಿ ಫುಲೆ, ಬಿಜೆಪಿ ಸಂಸದೆ
ರಾಜೀನಾಮೆ ಬಿಸಾಕಿ ಅವಮಾನವನ್ನು ತಡೆಯಬಹುದಲ್ಲ?
---------------------
ಚುನಾವಣೆಯಲ್ಲಿ ಗೆದ್ದು ಯಡಿಯೂರಪ್ಪರ ಋಣ ತೀರಿಸುತ್ತೇನೆ -ಕೆ.ಎಸ್. ಈಶ್ವರಪ್ಪ, ಬಿಜೆಪಿ ನಾಯಕ
ಋಣವನ್ನು ಯಡಿಯೂರಪ್ಪ ಹೆಣ ಎಂದು ಕೇಳಿಸಿಕೊಂಡಿದ್ದಾರೆ.

---------------------
ಸಿಎಂ ಸಿದ್ದರಾಮಯ್ಯ ಉಂಡ ಮನೆಗೆ ದ್ರೋಹ ಬಗೆಯುತ್ತಿದ್ದಾರೆ - ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ನಿಮಗೆ ನಿಮ್ಮ ಮಕ್ಕಳು ಎಸಗಿದ ದ್ರೋಹಕ್ಕಿಂತ ದೊಡ್ಡದೇ?
---------------------
ಈ ಚುನಾವಣೆಯಲ್ಲಿ 150 ಸ್ಥಾನ ಪಡೆಯುವುದಕ್ಕಿಂತಲೂ ಸಿಎಂ ಸಿದ್ದರಾಮಯ್ಯರನ್ನು ಸೋಲಿಸುವುದೇ ಮುಖ್ಯ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಅಂದರೆ ಈ ಬಾರಿ ಬಿಜೆಪಿಗೆ ಒಂದು ಸ್ಥಾನ ಮಾತ್ರ ಖಚಿತವೆನ್ನುತ್ತೀರಾ?
---------------------
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ ಬರದಿದ್ದರೆ ರಾಜಕೀಯ ನಿವೃತ್ತಿ -ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಹೀಗೆಲ್ಲ ಆಸೆ ತೋರಿಸಿದರೆ ನೀವು ನಿವೃತ್ತಿಯಾಗುವುದು ಅನಿವಾರ್ಯವಾದೀತು.

---------------------
ಸಿದ್ದರಾಮಯ್ಯರನ್ನು ಸೋಲಿಸುವುದೇ ನನ್ನ ಗುರಿ - ಶ್ರೀನಿವಾಸ ಪ್ರಸಾದ್, ಮಾಜಿ ಸಂಸದ
 ಜೊತೆಗೆ ಬಿಜೆಪಿಯನ್ನು ಗೆಲ್ಲಿಸುವುದು.

---------------------
ಸೃಜನಶೀಲತೆ ಇರುವವರು ಹೊಸತನ್ನು ಹುಟ್ಟಿಸಬಲ್ಲರು -ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ಮತ್ತೇಕೆ ನೀವು ಏನನ್ನೂ ಹುಟ್ಟಿಸಿಲ್ಲ?
---------------------
ಇಸ್ರೇಲ್‌ಗೆ ತನ್ನ ಮಾತೃಭೂಮಿ ಹೊಂದುವ ಹಕ್ಕಿದೆ -ಮುಹಮ್ಮದ್ ಬಿನ್ ಸಲ್ಮಾನ್, ಸೌದಿ ಯುವರಾಜ
ಅವಕಾಶ ಕೊಟ್ಟರೆ ಅವರು ಸೌದಿಯಲ್ಲೂ ತಮ್ಮ ಮಾತೃಭೂಮಿಯನ್ನು ಗುರುತಿಸಬಲ್ಲರು.

---------------------
ಕಾಂಗ್ರೆಸ್ ಪಕ್ಷದಲ್ಲಿ ಕಸ ಗುಡಿಸಿದ್ದೇನೆ. ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇದೆ - ಬಿ.ಬಿ. ಚಿಮ್ಮನಕಟ್ಟಿ, ಶಾಸಕ
ಕಸದ ಬುಟ್ಟಿಯಲ್ಲೊಮ್ಮೆ ಹುಡುಕಿ ನೋಡಿ.

---------------------
ಡಾ. ಬಿ.ಆರ್. ಅಂಬೇಡ್ಕರ್‌ರನ್ನು ನಾವು ಗೌರವಿಸಿದಷ್ಟು ಬೇರೆ ಯಾರೂ ಗೌರವಿಸಿಲ್ಲ -ನರೇಂದ್ರ ಮೋದಿ, ಪ್ರಧಾನಿ
ಸಂವಿಧಾನವನ್ನು ಧ್ವಂಸ ಮಾಡುವ ಮೂಲಕವೇ?
---------------------
ಬಿಜೆಪಿಯವರು ಗೋಸುಂಬೆಗಳು. ಹೇಳುವುದೊಂದು ಮಾಡುವುದೊಂದು -ರಾಮಲಿಂಗಾರೆಡ್ಡಿ, ಸಚಿವ
ಹೇಳಿದಂತೆ ಮಾಡಿದರೆ ಸಂವಿಧಾನ ಉಳಿಯುವುದಿಲ್ಲ.

---------------------
ಜನಾರ್ದನ ರೆಡ್ಡಿ ಒಬ್ಬ ದೇಶಪ್ರೇಮಿ -ಶ್ರೀರಾಮುಲು, ಸಂಸದ

ಅದಕ್ಕಾಗಿಯೇ ಇರಬೇಕು ಪ್ರತಿ ವರ್ಷ ಬಿಜೆಪಿಯ ವರಿಷ್ಠರಿಗೆ ಸೂಟ್‌ಕೇಸು ನೀಡುತ್ತಿರುವುದು.

---------------------
ಕಳಂಕಿತರಿಗೆ ಟಿಕೆಟ್ ಇಲ್ಲ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಹಾಗಾದರೆ ನೀವು ನಿವೃತ್ತಿಯಾಗಲಿದ್ದೀರಿ ಎಂದಾಯಿತು.

---------------------
ಬಿಜೆಪಿ ವಂಶಪಾರಂಪರ್ಯ ಆಡಳಿತವನ್ನು ವಿರೋಧಿಸುತ್ತದೆ -ಮುರಳೀಧರ ರಾವ್, ರಾಜ್ಯ ಬಿಜೆಪಿ ಉಸ್ತುವಾರಿ
ಯಡಿಯೂರಪ್ಪ ಅವರ ಮಗನಿಗೆ ಟಿಕೆಟ್ ಕೊಡಬಾರದು ಎಂದು ಪರೋಕ್ಷ ಸೂಚನೆಯೇ?
---------------------
ಬ್ಯಾಂಕಿಂಗ್ ವಲಯದಲ್ಲಿ ಹೆಚ್ಚುತ್ತಿರುವ ವಸೂಲಾಗದ ಸಾಲದಿಂದ ಪ್ರಾಮಾಣಿಕರಿಗೆ ತೊಂದೆರೆಯಾಗುತ್ತಿದೆ -ರಾಮನಾಥ್ ಕೋವಿಂದ್, ರಾಷ್ಟ್ರಪತಿ
ಪ್ರಾಮಾಣಿಕರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕಾಗಿ ಸಾಲ ಕಟ್ಟದವರನ್ನೆಲ್ಲ ವಿದೇಶಕ್ಕೆ ರವಾನೆ ಮಾಡಲಾಗುತ್ತಿದೆ.

---------------------
ನಮಗೆ ಬಿಜೆಪಿ, ಕಾಂಗ್ರೆಸ್ ಎರಡೂ ವಿರೋಧಿಗಳು -ಎಚ್.ಡಿ. ರೇವಣ್ಣ, ಜೆಡಿಎಸ್ ಮುಖಂಡ
ಚುನಾವಣೆಯ ಆನಂತರದ ಕತೆ ಏನು?
---------------------
ಫೇಸ್‌ಬುಕ್ ನಡೆಸಲು ನಾನೇ ಸೂಕ್ತ ವ್ಯಕ್ತಿ - ಝಕರ್‌ಬರ್ಗ್, ಫೇಸ್‌ಬುಕ್ ಮುಖ್ಯಸ್ಥ
ಫೇಕ್ ಬುಕ್ ನಡೆಸುವುದಕ್ಕೂ ಕೂಡ.

---------------------
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಜೆಪಿಯ ಹಿತ ಶತ್ರು -ಮಾತೆ ಮಹಾದೇವಿ, ಬಸವಧರ್ಮ ಪೀಠದ ಧರ್ಮಾಧ್ಯಕ್ಷೆ
ಬಿಜೆಪಿ ದೇಶದ ಹಿತ ಶತ್ರು ಎಂದು ಹೇಳುವವರಿದ್ದಾರೆ.

---------------------
ಭಯೋತ್ಪಾದನೆ ಅಂತರ್‌ರಾಷ್ಟ್ರೀಯ ಶಾಂತಿಗೆ ಧಕ್ಕೆಯಾಗಿರುವ ಅಂಶ -ಸುಶ್ಮಾ ಸ್ವರಾಜ್, ಕೇಂದ್ರ ಸಚಿವೆ
ದೇಶದೊಳಗಿನ ಶಾಂತಿಗೆ ಧಕ್ಕೆಯಾಗಿರುವುದರ ಬಗ್ಗೆಯೂ ಹೇಳಿ.

---------------------
ಕೋಮುವಾದದ ಜೊತೆ ರಾಜಿ ಇಲ್ಲ -ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ
ಅಧಿಕಾರದ ಜೊತೆಗೆ ಮಾತ್ರ ರಾಜಿ, ಅಲ್ಲವೇ?
---------------------
ಯಡಿಯೂರಪ್ಪ ವಜ್ರದಂತಹ ಮನುಷ್ಯ, ಸುತ್ತಲಿನವರು ಸರಿ ಇಲ್ಲ -ವಿ. ಸೋಮಣ್ಣ, ಮಾಜಿ ಸಚಿವ
ವಜ್ರವೀಗ ಇದ್ದಿಲಾಗಿದೆ.
 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...