ಕೆ.ಆರ್.ಪೇಟೆ: ಲಾರಿಗಳ ನಡುವೆ ಢಿಕ್ಕಿ; ನಾಲ್ವರು ಗಂಭೀರ

Update: 2018-04-09 17:20 GMT

ಕೆ.ಆರ್.ಪೇಟೆ, ಎ.9: ಎರಡು ಲಾರಿಗಳ ನಡುವೆ ಢಿಕ್ಕಿ ಸಂಭವಿಸಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆಯ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಜಾಗಿನಕೆರೆ ಗ್ರಾಮದ ಬಳಿ ನಡೆದಿದೆ.

ಲಾರಿ ಚಾಲಕ ರಾಮು ಮತ್ತು ಕ್ಲೀನರ್ ರಮೇಶ್, ಕಾರ್ಮಿಕರಾದ ಬೋರೇಗೌಡ ಹಾಗೂ ತಿಮ್ಮಯ್ಯ ತೀವ್ರವಾಗಿ ಗಾಯಗೊಂಡಿದ್ದು, ಇವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸೇರಿಸಲಾಗಿದೆ.

ಪಟ್ಟಣ ಪೋಲಿಸ್ ಠಾಣೆಯ ಸಬ್‍ಇನ್ಸ್ ಪೆಕ್ಟರ್ ಎಚ್.ಎಸ್.ವೆಂಕಟೇಶ್ ಮತ್ತು ಸಿಬ್ಬಂದಿ ಕ್ರೇನ್ ತರಿಸಿ ಅಪಘಾತಕ್ಕೀಡಾದ ಲಾರಿಗಳನ್ನು ಸ್ಥಳಾಂತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News