ಹನೂರು: ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ

Update: 2018-04-21 16:44 GMT

ಹನೂರು,ಎ.21: ಬಿಜೆಪಿಯ ಮಂಡಲ, ವಿವಿಧ ಹೋಬಳಿಯ ಶಕ್ತಿ ಕೇಂದ್ರಗಳ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು ಇಂದು ಬಿಜೆಪಿ ಪಕ್ಷಕ್ಕೆ  ರಾಜೀನಾಮೆ ನೀಡಿ ಜೆಡಿಎಸ್ ಹಿರಿಯ ಮುಖಂಡ ರಾಜಶೇಖರಮೂರ್ತಿ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ನಂತರ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷರಾಗಿದ್ದ ರಾಜೇಶೇಖರ್ ಮಾತನಾಡಿ, ಮಂಜುನಾಥ್‍ರವರು ಹನೂರು ಕ್ಷೇತ್ರದ ಬಿಜೆಪಿ ಪಕ್ಷದ ಪ್ರಬಲ ಅಭ್ಯರ್ಥಿಯಾಗಿದ್ದರು. ಪಕ್ಷದ ಹೈಕಮಾಂಡ್ ನಡೆಸಿದ ಎಲ್ಲಾ ಸಮೀಕ್ಷೆಗಳಲ್ಲೂ ಸಹ ಇವರು ಮುಂಚೂಣಿಯಲ್ಲಿದ್ದರು. ಆದರೆ ಬಿಜೆಪಿ ಹಿರಿಯ ಮುಖಂಡರ  ಒತ್ತಡಕ್ಕೆ ಮಣಿದು ಇಂದು ಹಿಂದುಳಿದ ಅಭ್ಯರ್ಥಿಗೆ ಟಿಕೆಟ್ ತಪ್ಪಿದ್ದು ಅನ್ಯರಿಗೆ ಟಿಕೆಟ್ ನೀಡಿದೆ. ಬಿಜೆಪಿಯಲ್ಲಿ ನಿಷ್ಟಾವಂತರಿಗೆ ಬೆಲೆಯಿಲ್ಲ ಎಂಬದನ್ನು ಅರಿತು, ಜೆಡಿಎಸ್‍ನ ಅಭ್ಯರ್ಥಿಯಾಗಿರುವ ಮಂಜುನಾಥ್‍ಗೆ ಸಂಪೂರ್ಣ ಬೆಂಬಲ ನೀಡಲು ಬಿಜೆಪಿಯ ಅಧ್ಯಕ್ಷರೂ ಸೇರಿ ಎಲ್ಲಾ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ವಕೀಲ ರುದ್ರಾರದ್ಯ, ಪೂನ್ನಾಚ್ಚಿ ಮಹದೇವಸ್ವಾಮಿ, ರಾಚ್ಚಪ್ಪ, ಮಹದೇವಸ್ವಾಮಿ, ಆರ್ ಎಸ್ ದೂಡ್ಡಿ ಅಬ್ದುಲ್, ಸಕಲೇಶ್, ಅಮೀನ್, ಮಂಜೇಶ್, ಸಕಲೇಶ್ ಇನ್ನಿತರರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News