ಬೆಂಗಳೂರು: ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

Update: 2018-04-24 17:28 GMT

ಬೆಂಗಳೂರು, ಎ.24: ಇಬ್ಬರು ಸ್ನೇಹಿತರ ನಡುವೆ ಜಗಳ ನಡೆದು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ದುರ್ಘಟನೆ ಇಲ್ಲಿನ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲತಃ ಮಣಿಪುರದ ಅಬ್ಬು ಯಾನೆ ಹುಸೇನ್(20) ಕೊಲೆಯಾದ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಾಜಿನಗರದ ಬಾರ್ ಅಂಡ್ ರೆಸ್ಟೋರೆಂಟ್ ಪಕ್ಕದ ಜ್ಯೂಸ್ ಸೆಂಟರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಬ್ಬು, ಸೀಗೆಬೇಲಿ ರಸ್ತೆಯ ಖುರೇಶಿ ಮಸೀದಿ ಬಳಿ ರೂಮ್ ಮಾಡಿಕೊಂಡು ಜಮ್ಮಾಖಾನ್ ಎಂಬಾತನ ಜತೆ ವಾಸವಾಗಿದ್ದನು ಎನ್ನಲಾಗಿದೆ.

ಇವರಿಬ್ಬರ ಮಧ್ಯೆ ಯಾವುದೋ ವಿಚಾರವಾಗಿ ಜಗಳ ನಡೆದಿದ್ದು, ಸೋಮವಾರ ರಾತ್ರಿ 11:15ರ ಸುಮಾರಿಗೆ ಅಬ್ಬು ಕೆಲಸ ಮುಗಿಸಿಕೊಂಡು ಕೊಠಡಿಗೆ ಬಳಿ ಬರುತ್ತಿದ್ದಾಗ ಈತನನ್ನು ಅಡ್ಡ ಹಾಕಿದ ಸ್ನೇಹಿತ ಜಮ್ಮಾಖಾನ್ ಜಗಳವಾಡಿ ಚಾಕುನಿಂದ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ಅಬ್ಬುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆರೋಪಿಗಾಗಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News