ತಪ್ಪಿದ ಬಿಜೆಪಿ ಟಿಕೆಟ್: ಬಂಡಾಯ ಅಭ್ಯರ್ಥಿಯಾಗಿ ಎಚ್.ಎಸ್.ನಾಗರಾಜ್ ನಾಮಪತ್ರ ಸಲ್ಲಿಕೆ
Update: 2018-04-24 18:10 GMT
ದಾವಣಗೆರೆ,ಎ.24: ಹೈಕಮಾಂಡ್ ನನಗೆ ಟಿಕೇಟ್ ನೀಡದ ಕಾರಣ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸುತ್ತಿದ್ದೇನೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಎಚ್.ಎಸ್.ನಾಗರಾಜ್ ಹೇಳಿದರು.
ಉಮೇದುವಾರಿಕೆ ಸಲ್ಲಿಸಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ಜಿಲ್ಲಾ ನಾಯಕರು ಉದ್ದೇಶ ಪೂರ್ವಕವಾಗಿ ನನ್ನನ್ನು ಸೈಡ್ ಲೈನ್ ಮಾಡುತ್ತಿದ್ದಾರೆ. ನಾನು ಕೂಡ ಬಿಜೆಪಿಯಲ್ಲಿ 10 ವರ್ಷಗಳ ಕಾಲ ದುಡಿದಿದ್ದೇನೆ ಎಂದರು.
ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಜಿಲ್ಲಾ ನಾಯಕರ ಒಳಜಗಳದಿಂದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಜಿಲ್ಲಾ ನಾಯಕರಿಂದಲೇ ಬಿಜೆಪಿ ಅವನತಿಗೊಳ್ಳುತ್ತದೆ. ಇಲ್ಲಿ ಕೆಲಸ ಮಾಡುವವರನ್ನು ಮೂಲೆಗುಂಪಾಗಿ ಮಾಡಲಾಗುತ್ತಿದೆ. ಬೆಂಬಲಿಗರ ಸಭೆ ನಡೆಸಿ ಅವರ ಅಭಿಪ್ರಾಯ ಪಡೆದಿದ್ದೇನೆ. ನಾನು ಸ್ಫರ್ಧೆ ಮಾಡುವುದು ಕಾಯಂ. ಕೇವಲ ಟಿಕೆಟ್ಗಾಗಿ ಮಾತ್ರ ಬೇಡಿಕೆ ಇಟ್ಟಿದ್ದೆ. ಆದರೆ ನನಗೆ ಸಿಗಲಿಲ್ಲ. ನಾಮಪತ್ರ ವಾಪಸ್ ತೆಗೆದುಕೊಳ್ಳುವ ಮಾತೇ ಇಲ್ಲ ಎಂದರು.