ಉಗ್ರರ ಗುಂಡಿಗೆ ನಾಗರಿಕ ಸಾವು
Update: 2018-04-26 16:11 GMT
ಶ್ರೀನಗರ, ಎ. 26: ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಗುರುವಾರ ಅಪರಾಹ್ನ ಉಗ್ರರು ಭದ್ರತಾ ಪಡೆಗಳ ಮೇಲೆ ನಡೆಸಿದ ದಾಳಿಯ ಸಂದರ್ಭ ಓರ್ವ ನಾಗರಿಕ ಮೃತಪಟ್ಟಿದ್ದಾನೆ. ಸಿಆರ್ಪಿಎಫ್ ಸಿಬ್ಬಂದಿ ಹಾಗೂ ಪೊಲೀಸರನ್ನು ಒಳಗೊಂಡ ಆರ್ಒಪಿ ತಂಡದ ಮೇಲೆ ಉಗ್ರರು ಹಾರಿಸಿದ ಗುಂಡಿನಿಂದ ಶಕೀಬ್ ಶಬೀರ್ ಎಂಬವರು ಸಾವನ್ನಪ್ಪಿದರು. 25 ವರ್ಷ ವಯಸ್ಸಿನ ಶಬೀರ್ ಗುಂಡು ತಾಗಿ ಮೃತಪಟ್ಟಿರುವುದಾಗಿ ಶೋಪಿಯಾನದಲ್ಲಿರುವ ಪೊಲೀಸ್ ನಿಯಂತ್ರಣ ಕೊಠಡಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಸ್ಯಾಂಟ್ರೋ ಕಾರಿನಲ್ಲಿ ತೆರಳುತ್ತಿದ್ದ ಉಗ್ರರು ಲಾಝಿಬಾಲ್ ಚೌಕ್ ಹಾಗೂ ಅನಂತ್ನಾಗ್ನಲ್ಲಿ ಪೊಲೀಸರ ಆರ್ಒಪಿ ಹಾಗೂ ಸಿಆರ್ಪಿಎಫ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿದರು. ಇದರಿಂದ ಶೋಪಿಯಾನದ ಶಕೀರ್ ಶಬೀರ್ ಗಂಭೀರವಾಗಿ ಗಾಯಗೊಂಡರು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.